
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಪ್ರಥಮ ಬಾರಿಗೆ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಅರಣ್ಯ ಇಲಾಖೆ ಉಳಿಸಿಕೊಳ್ಳಲಿ ಎಂಬ ಮನವಿಯನ್ನು ಕಿರವತ್ತಿ ಯುವ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶಾಸಕರೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಕಿರವತ್ತಿಯ ಜಯತಿ ನಗರ ಸರ್ವೆ ನಂ.24 ರಲ್ಲಿ ಕೊನೆಯ ಓಣಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶವಾಗದಂತೆ ಅಗಳ ತೆಗೆಯಲಾಗಿತ್ತು. ಆದರೆ ಅದಕ್ಕೆ ತಾಗಿಕೊಂಡಿರುವ ಮನೆಯವರು ಎಲ್ಲಾ ಅಗಳಗಳನ್ನೂ ಮುಚ್ಚಿ ಅರಣ್ಯ ಒತ್ತುವರಿ ಮಾಡಿದ್ದಾರೆ. ವಿಶೇಷವೆಂದರೆ ಪ್ರತಿನಿತ್ಯ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದರೂ ಆಗಿರುವ ಒತ್ತುವರಿಯನ್ನು ಕಂಡರೂ ಕಾಣದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುತ್ತಾರೆ.
ಅರಣ್ಯ ಹಕ್ಕು ಸಮಿತಿಗೆ ಮಾಹಿತಿ ಇಲ್ಲದೇ ಅವರ ಸಹಿಯನ್ನು ನಕಲು ಮಾಡಿ ಜಿಪಿಎಸ್ ಮಾಡಿ ಸುಳ್ಳು ನಕಾಶೆ ಸೃಷ್ಟಿ ಮಾಡಿರುತ್ತಾರೆ. ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಎಲ್ಲಿಯವರೆಗೆ ಅರಣ್ಯ ಇಲಾಖೆಯ ಅಗಳ ಇತ್ತು ಅಲ್ಲಿಯವರೆಗೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಸಕ ಶಿವರಾಮ ಹೆಬ್ಬಾರ್ ಅವರ ಅನುಪಸ್ಥಿತಿಯಲ್ಲಿ ಯಲ್ಲಾಪುರದ ಅವರ ಕಚೇರಿಯಲ್ಲಿ ಕಾರ್ಯದರ್ಶಿ ನಾಗರಾಜ ನಾಯ್ಕ, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ(ಐ.ಎಫ್.ಎಸ್), ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಗ್ರೇಡ್-೨ ತಹಸೀಲ್ದಾರ ಸಿ.ಜಿ.ನಾಯ್ಕ , ಪಿ.ಐ ಅನುಪಸ್ಥಿತಿಯಲ್ಲಿ ಎ.ಎಸ್.ಐ ವಿಠ್ಠಲ ಮಾಲವಾಡ್ಕರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಗಳನ್ನು ಮಾಜಿ ಶಾಸಕ ವಿ.ಎಸ್. ಪಾಟೀಲ, ಎಂ.ಎಲ್.ಸಿ ಶಾಂತಾರಾA ಸಿದ್ದಿ, ಜಿಲ್ಲಾಧಿಕಾರಿ , ಸಹಾಯಕ ಆಯುಕ್ತ , ಎಎಸಿಎಫ್, ಪಿಡಿಒ ಅವರಿಗೆ ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಅರ್ಜುನ ಬೆಂಗೇರಿ, ರೈತ ಸಂಘಟನೆಯ ಪ್ರಮುಖ ಚಿದಾನಂದ ಹರಿಜನ, ಸುಭಾಶ್ ಶೇಷಗಿರಿ, ಪ್ರಭು ಚಿಂಚಕAಡಿ, ಸುರೇಶ ಜಾಧವ ಮತ್ತು ಮಹಿಳಾ ಪ್ರಮುಖರು , ಸಮಿತಿ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಒತ್ತುವರಿಯಾದ ಸ್ಥಳದಲ್ಲಿ ದಟ್ಟ ಅಡವಿಯಿತ್ತು, ಅಲ್ಲಿದ್ದ ಮರಗಳು ಎಲ್ಲಿ ಕಾಣೆಯಾಗಿವೆ? ಮರಗಳು ಕುರುಹು ಇದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿರುವುದು ಎದ್ದು ಕಾಣುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂಬುದು ಪರಿಸರವಾದಿಗಳು ಮತ್ತು ಸಾರ್ವಜನಿಕರ ಹಕ್ಕೊತ್ತಾಯವಾಗಿರುತ್ತದೆ. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಹಿಂಜರಿಯುವುದಿಲ್ಲ ಮತ್ತು ಧರಣಿ ಕೂರುವುದಕ್ಕೂ ಸಿದ್ಧ


Prathidvani Yellapura