

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗಾಗಿ ನಡೆಸುತ್ತಿದ್ದ ” ಮಂಚಿಕೇರಿ ಟ್ಯೂಷನ್ ಸೆಂಟರ್” ನ ವಿದ್ಯಾರ್ಥಿನಿ ಅನನ್ಯ ಅಶೋಕ ನಾಯ್ಕ್ ನವೋದಯ ಪ್ರವೇಶ ಪರೀಕ್ಷಯಲ್ಲಿ ಆಯ್ಕೆಯಾಗಿದ್ದು ಸೈ ಎನಿಸಿಕೊಂಡಿದ್ದಾಳೆ.
ನವೋದಯ ಶಾಲೆಗೆ ಸೇರಲು ತಾಲೂಕಿನಿಂದ ನಾಲ್ಕು ವಿದ್ಯಾರ್ಥಿಗಳಿಗೆ ಅವಕಾಶವಿದ್ದು 600 ಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಮಂಚಿಕೇರಿಯ ಅನನ್ಯ ನಾಯ್ಕ್ ಒಬ್ಬಳಾಗಿದ್ದಾಳೆ. ಇದಕ್ಕೆಲ್ಲಾ ಟ್ಯೂಷನ್ ನೀಡುತ್ತಿದ್ದ ಯಲ್ಲಾಪುರ ಪ್ರತಿಷ್ಠಿತ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಸಚಿನ್ ನಾಯ್ಕ್ ಮಾರ್ಗದರ್ಶನ ಕಾರಣವಾಗಿದ್ದು ಸಂತಸ ತಂದಿದೆ. ವಿದ್ಯಾರ್ಥಿನಿ ಪೋಷಕರಾದ ಅಶೋಕ್ ಪರಮೇಶ್ವರ ನಾಯ್ಕ್ ಮತ್ತು ವಿಮಲ ಅಶೋಕ ನಾಯ್ಕ ಸಂತಸಗೊಂಡಿದ್ದಾರೆ. ಅನನ್ಯ ನಾಯ್ಕ್ ಸ್ಥಳೀಯ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಎಂಬುದು ಗಮನಾರ್ಹವಾಗಿದೆ. ಇದರಿಂದ ಗ್ರಾಮಸ್ಥರಿಗು ಸಂತಸವಾಗಿದ್ದು ವಿದ್ಯಾರ್ಥಿನಿಯ ಭವಿಷ್ಯ ಉಜ್ವಲ ವಾಗಲೆಂದು ಹಾರೈಸಿದ್ದಾರೆ.

Prathidvani Yellapura