Breaking News

22 ವರ್ಷಗಳ ಸುದೀರ್ಘ ಸೇವೆಗೆ ಮಹೀಂದ್ರ ಮಾರ್ಷಲ್ ವಾಹನಕ್ಕೆ ಬೀಳ್ಕೊಡುಗೆ.


ಪ್ರತಿಧ್ವನಿ,ಯಲ್ಲಾಪುರ: ಬಹುತೇಕ ಸರ್ಕಾರಿ ಇಲಾಖೆಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ದುಡಿದು ನಿವೃತ್ತಿ ಹೊಂದುವ ವೇಳೆಗೆ ಅವರ ಸೇವೆ ಸ್ಮರಿಸಿ ಗೌರವಿಸಿ ಬೀಳ್ಕೊಡುವುದು ವಾಡಿಕೆ. ಅಂತೆಯೆ ಜೀವವಿರುವ ಮನುಜ ಸೇವೆ ಯಷ್ಟೆ ನಿರ್ಜೀವಿ ವಾಹನದ ಸೇವೆಯು ಅಷ್ಟೆ ಪ್ರಾಮುಖ್ಯತೆ ಪಡೆದಿದೆ ಎಂದು ಯಲ್ಲಾಪುರದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗದ 22 ವರ್ಷದ ಸೇವೆಗೆ ಗೌರವಿಸಿ ಬೀಳ್ಕೊಟ್ಟ ಭಾವನಾತ್ಮಕ ಸನ್ನಿವೇಶಕ್ಕೆ ಜಿಲ್ಲಾ ಪಂಚಾಯತ ಕಚೇರಿ ಸಾಕ್ಷಿಯಾಯಿತು.
ಸರ್ಕಾರಿ ಆದೇಶದಂತೆ15 ವರ್ಷಗಳ ಹಿಂದಿನ ಯಾವುದೆ ವಾಹನಗಳನ್ನು ಯಾವುದೆ ಇಲಾಖೆಗಳು ಬಳಸದೆ ನಿರಪಯುಕ್ತ ಎಂದು ತೋರಿಸಬೇಕಿದೆ ಅದರನ್ವಯ ಯಲ್ಲಾಪುರದ ಜಿಲ ಪಂಚಾಯತ ಇಂಜನಿಯರಿಂಗ್ ವಿಭಾಗದಲ್ಲಿ ಕಳೆದ 22 ವರ್ಷಗಳಿಂದ ಇಲಾಖೆಯ ಸೇವೆ ಸಲ್ಲಿಸಿದ ಮಹೀಂದ್ರ ಮಾರ್ಷಲ್ ವಾಹನವನ್ನು ನಿರುಪಯುಕ್ತಗೊಳಿಸಬೇಕಿದ್ದು ಇದುವರೆಗು ಸೇವೆ ನೀಡಿದಕ್ಕಾಗಿ ಎ.ಇ.ಇ ಅಶೋಕ್ ಭಂಟ್ ನೇತೃತ್ವದಲ್ಲಿ ಇದೇ ವಾಹನಕ್ಕೆ ಚಾಲಕರಾಗಿ ಸೇವೆನೀಡಿದವರು ಸೇರಿದಂತೆ ಇಲಾಖೆ ಸಿಬ್ಬಂದಿಗಳು ಪೂಜೆ ಸಲ್ಲಿಸಿ ಕೃತಜ್ಞತೆ ತೋರಿದ್ದಾರೆ. ಇದರೊಂದಿಗೆ ಜೀವವಿರುವ ಮನುಷ್ಯನ ಸೇವೆಗೆ ಮಾತ್ರವಲ್ಲ ನಿರ್ಜೀವದ ವಾಹನಗಳ ಸೇವೆಯು ಸಹ ಶ್ಲಾಘನೀಯವಾದುದು ಎಂಬುದನ್ನು ತೋರಿಸಿದಂತಾಗಿದೆ. ಇಂತಹ ಭಾವನಾತ್ಮಕ ನಡೆಗೆ ತಾಲೂಕಿನ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *