
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ನೂತನ ಆಡಳಿತ ಸೌಧದ ಮುಂಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯ ಮೇಲೆ ಲಾರಿಯೊಂದು ವ್ಯಕ್ತಿಯೋರ್ವನ ಕಾಲಿನ ಮೇಲೆ ಹರಿದು ಕಾಲು ಮುರಿದುಹೋದÀ ಘಟನೆ ನಡೆದಿದೆ.
ಪಟ್ಟಣದ ಹೆಸರಾಂತ ಹೊಟೆಲ್ ಗೀತಾ ಭವನದ ಮಾಲೀಕರ ಮಗನಾದ ಶ್ರೀನಿವಾಸ ಕೃಷ್ಣ ಭಾಗ್ವತ (೪೬) ಎಂಬಾತನೇ ಅಪಘಾತಕ್ಕೊಳಗಾದ ವ್ಯಕ್ತಿಯಾಗಿದ್ದಾನೆ. ಈತ ನೂತನವಾಗಿ ನಿರ್ಮಿಸಲಾಗಿರುವ ತಹಸೀಲ್ದಾರರ ಕಚೇರಿ ಮುಂಭಾಗದಲ್ಲಿ ತನ್ನ ಸ್ಕೂಟಿಯಲ್ಲಿ ಚಲಿಸುವ ವೇಳೆ ಹಿಂದಿನಿAದ ಬಂದ ಲಾರಿಯೊಂದು ಸ್ಕೂಟಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಶ್ರೀನಿವಾಸನ ಎಡಗಾಲಿಗೆ ಬಾರೀ ಗಾಯಗೊಂಡು ಸ್ಕೂಟಿ ಜಖಂಗೊAಡಿದೆ. ತಕ್ಷಣ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಚಾಲಕ ಬೆಳಗಾವಿ ಸವದತ್ತಿ ತಾಲೂಕಿನ ಗುಡುಮಕೇರಿ ನಿವಾಸಿ ಪಕೀರಸ್ವಾಮಿ ಎಂಬುವನ ಮೇಲೆ ದೂರು ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Prathidvani Yellapura