
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಹಣ್ಣುಗಳ ರಾಜ ಮಾವು, ವರ್ಷಕ್ಕೊಮ್ಮೆ ಮಾರುಕಟ್ಟೆ ಪ್ರವೇಶಿಸಿ ಮಾವಿನ ಹಣ್ಣಿ ಪ್ರಿಯರಿಗೆ ನಾಲಿಗೆಗೆ ರುಚಿ ಹತ್ತಿಸುತ್ತದೆ. ಈ ಬಾರಿ ಅದೇಕೋ ಮಾರುಕಟ್ಟೆಗೆ ಮಾವು ತಡವಾಗಿ ಬಂದಿದ್ದು ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿದೆ.
ಘಟ್ಟದ ಕೆಳಗಿನ ಕರೆ ಈಶಾಡ ಮಾವು , ಘಟ್ಟದ ಮೇಲಿನವರಿಗೆ ಅತ್ಯಂತ ಪ್ರಿಯವಾದುದು. ಸದ್ಯ ಮಾವಿನ ಮಾರುಕಟ್ಟೆಯಲ್ಲಿ ಆಪೂಸ್, ಮಲ್ಲಿಕಾ, ಸೆಂದೂಲಾ, ಕಸಿ ಮುಂತಾದ ಜಾತಿಯ ಮಾವು ಮಾರಾಟವಾಗುತ್ತಿದ್ದು ದರ ಹೆಚ್ಚಿದೆ.

ಉತ್ತಮ ಗಾತ್ರ, ಗುಣಮಟ್ಟದ ಕರೆ ಈಶಾಡ ಡಜನ್ಗೆ 500 ರಿಂದ 800 ರವರೆಗೂ , ಮಲ್ಲಿಕಾ ಕೆಜಿಗೆ 150 ರಿಂದ 200 ಕ್ಕೆ ಮಾರಾಟವಾಗುತ್ತಿದೆ. ಮಾವಿನಪ್ರಿಯರಿಗೆ ದರದ ಚಿಂತೆಯಿಲ್ಲ, ವರ್ಷಕ್ಕೊಮ್ಮೆ ಮಾವು ಸವಿಯಲೇಬೇಕೆಂದು ಕೊಂಡುಕೊಳ್ಳುತ್ತಿದ್ದಾರೆ.

ಈ ವರ್ಷ ಎಲ್ಲೆಡೆ ಮಾವಿನ ಫಸಲು ಕಡಿಮೆಯಾಗಿದ್ದು ದರ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗೂ ಹೂ ಬರುವ ಸಮಯದಲ್ಲಿ ಅನೇಕ ಕಡೆ ಅಕಾಲಿಕ ಮಳೆ, ಆಲಿಕಲ್ಲಿನ ಮಳೆ ಬಿದ್ದ ಕಾರಣವೂ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ವರ್ಷಕ್ಕೊಮ್ಮೆ ಮಾವಿನ ಸಿಹಿ ಸವಿಯಲೇ ಬೇಕು, ಅದರಲ್ಲೂ ಕರೆ ಈಶಾಡಿನ ಸವಿ ನಾಲಿಗೆ ಮೇಲೆ ತೇಲಲೇಬೆಕೆಂಬುದು ಮಾವಿನಪ್ರಿಯರ ಮಾತಾಗಿದೆ.





Prathidvani Yellapura