
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ – ಕರ್ನಾಟಕ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪಲಿತಾಂಶ ಹೊರ ಬಿದ್ದಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶಿವರಾಮ ಹೆಬ್ಬಾರ್ ಗೆಲುವು ದಾಖಲಿಸಿದ್ದಾರೆ. ಯಲ್ಲಾಪುರದಲ್ಲಿ ಅಭಿಮಾನಿಗಳು,ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು.


ಕುಮುಟಾದಲ್ಲಿ ನಡೆದ ಮತ ಎಣಿಕೆ ಪಲಿತಾಂಶ ಹೊರಬೀಳುತ್ತಲೆ ಹೆಬ್ಬಾರ್ ಮನೆಯಲ್ಲಿ ಸಂತಸದ ಸಿಹಿ ಹಂಚಲಾಯಿತು ಪತ್ನಿ ವನಜಾಕ್ಷಿ ಹೆಬ್ಬಾರ್, ಮಗಳು ಶೃತಿ ರಾವ್, ಸೊಸೆ ದಿವ್ಯಾ ಹೆಬ್ಬಾರ್ ಹಾಗು ಮೊಮ್ಮಕ್ಕಳು ಹೆಬ್ಬಾರ್ ಗೆಲುವನ್ನು ಸಂಭ್ರಮಿಸಿದರು.

ಸಂಜೆಯಾಗುತ್ತಲೆ ಯಲ್ಲಾಪುರ ಪ್ರವೇಶಿಸಿದ ಸಚಿವ ಹೆಬ್ಬಾರ್ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ಗ್ರಾಮದೇವಿಗೆ ಕುಟುಂಬ ಸಹಿತ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಹೆಬ್ಬಾರ್ ನೆರೆದಿದ್ದ ಸಹಸ್ರಾರು ಸಂಖ್ಯೆಯ ಜನರಿಗೆ ಕೈ ಮುಗಿದು ಧನ್ಯತೆ ಅರ್ಪಿಸಿದರು.

ನಂತರ ಮೆರವಣಿಗೆ ಮೂಲಕ ಸಾಗಿ ಬಂದು ಅಂಬೇಡ್ಕರ್ ವೃತ್ತದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದರು.


ಬೆನ್ನಿಗೆ ಚೂರಿಹಾಕಿದ ಪಕ್ಷದೊಳಗಿನ ಕುತಂತ್ರಿಗಳ ಚಳಿ ಬಿಡಿಸಿದ ಹೆಬ್ಬಾರ್ “
ಕ್ಷೇತ್ರದ ಜನರ ಆಶಿರ್ವಾದ ಗುರು ಹಿರಿಯರ ಅಭಯ ಮತ್ತು ತಾಯಂದಿರ ಬೆಂಬಲ ಮುಖ್ಯವಾಗಿ ನನ್ನ ಕಾರ್ಯಕರ್ತರ ಶ್ರಮದ ಫಲವೆ ನನ್ನ ಗೆಲುವಿಗೆ ಪ್ರಮುಖ ಕಾರಣವಾಗಿದೆ ಅವರೆಲ್ಲರಿಗು ನಾನು ಚಿರ ಋಣಿ ಎಂದರು.
ಪಕ್ಷದಲ್ಲೆ ಇದ್ದು ಬೆನ್ನಿಗೆ ಚೂರಿಹಾಕುವ ಮಂದಿಗೆ ನನ್ನ ಗೆಲುವು ಬೇಸರ ತಂದಿದೆ. ಅಂತಹ ವಿಷ ವ್ಯೂಹವನ್ನು ಭೇದಿಸುವ ಶಕ್ತಿ ಭಗವಂತ ನೀಡಿದ ಕಾರಣ ವಿಷಕಂಠನಾಗಿ ಎಲ್ಲವನ್ನು ನುಂಗಿ ಗೆಲುವು ಸಾಧಿಸಿದ್ದೇನೆ ಎಂದರು.
ನನ್ನ ನಲವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಜಾತಿ,ಧರ್ಮ,ಮೇಲು,ಕೀಳು ಆ ಪಕ್ಷ ಈ ಪಕ್ಷ ವೆಂಬ ಭೇದಭಾವದ ರಾಜಕಾರಣ ಮಾಡಿಲ್ಲ ಮುಂದೆಯು ಮಾಡುವುದಿಲ್ಲ. ನೀವು ಕೊಟ್ಟ ಅಧಿಕಾರಕ್ಕೆ ಎಂದಿಗು ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಇದಕ್ಕೆ ಯಲ್ಲಾಪುರ ಗ್ರಾಮದೇವಿ, ಮುಂಡಗೋಡು ಗ್ರಾಮದೇವಿ, ಬನವಾಸಿಯ ಮಧುಕೇಶ್ವರ ನೆ ಸಾಕ್ಷಿ ಎಂದರು





Prathidvani Yellapura