
ಪ್ರತಿಧ್ವನಿ,ಯಲ್ಲಾಪುರ : ಅನಪೇಕ್ಷಿತ ಜೀವನ ಶೈಲಿಯಿಂದಾಗಿ ಸ್ವಯಂ ನಾಟಿ ವೈದ್ಯರಾಗಿದ್ದ ವನವಾಸಿಗಳಿಗೂ ಇತ್ತೀಚಿನ ದಿನಗಳಲ್ಲಿ ಸ್ವಾಸ್ಥ್ಯಕ್ಕಾಗಿ ಔಷಧಿ-ಚಿಕಿತ್ಸೆಗಳ ಅಗತ್ಯ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಣ್ಣ-ಪುಟ್ಟ ಖಾಯಿಲೆಗಳಿಗೂ ವೈದ್ಯರನ್ನು ಆಶ್ರಯಿಸಬೇಕಾಗಿದೆ. ವನವಾಸಿ ಕಲ್ಯಾಣದ ಗಂಗೋತ್ರಿ ಎನಿಸಿರುವ ಚಿಪಗೇರಿಯ ವಿದ್ಯಾರ್ಥಿ ನಿಲಯದ ಆವರಣದಲ್ಲಿ ವೈದ್ಯಕೀಯ ರಂಗದ ಹಿರಿ-ಕಿರಿಯರಿಗೆ ಅಧ್ಯಯನ ಮತ್ತು ಅಪೂರ್ವ ಅನುಭವಗಳಿಗೆ ಅವಕಾಶ ನೀಡಿರುವುದು ಸಮಂಜಸವಾಗಿದೆ ಎಂದು ವಿಧಾನಪರಿಷತ್ ಸದಸ್ಯ ವನವಾಸಿ ಕಲ್ಯಾಣದ ರಾಜ್ಯ ಕಾರ್ಯದರ್ಶಿ ಶಾಂತಾರಾಮ ಸಿದ್ಧಿ ಹೇಳಿದರು.

ಅವರು ತಾಲೂಕಿನ ಗಡಿಭಾಗದ ಚಿಪಗೇರಿಯ ಶ್ರೀರಾಮ ವನವಾಸಿ ವಿದ್ಯಾರ್ಥಿ ನಿಲಯದ ಆವಾರದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ, ಶಿರಸಿ ಜಿಲ್ಲೆ ಹಾಗೂ ರಾಷ್ಟಿçÃಯ ವೈದ್ಯಕೀಯ ಸಂಘಟನೆ (ಎನ್.ಎಂ.ಓ)ಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಶ್ರೀ ಭಗವಾನ್ ಪರಶುರಾಮ ಸೇವಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ವನವಾಸಿ ಕಲ್ಯಾಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ಮಾತನಾಡಿ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮುಗ್ಧರಿಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಸಂಘಟನೆಯ ಪ್ರಮುಖ ಗುರಿ ಮತ್ತು ಉದ್ದೇಶವಾಗಿz. ಹಿಂದೂಳಿದ ಸಮುದಾಯದವರ ನಾಯಕ ಅಂಬೇಡ್ಕರ ಜಯಂತಿಯಂದೇ ಈ ಕಾರ್ಯಕ್ರಮ ಇಟ್ಟುಕೊಂಡಿರುವುದು ಅರ್ಥಪೂರ್ಣ ಸಂಘಟಕರು ಗ್ರಾಮೀಣ ಪ್ರದೇಶಗಳಿಗೆ ಸ್ವಯಂ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಯೋಗ-ಕ್ಷೇಮ ವಿಚಾರಿಸುವ ಕಾರ್ಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವೂ, ಉತ್ತೇಜಕವೂ ಆಗಿದ್ದು, ರಾಷ್ಟೀಯ ಚಾರಿತ್ರ ನಿರ್ಮಾಣ ಕಾರ್ಯದಲ್ಲಿ ಎನ್.ಎಂ.ಓ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ಏನ್.ಎ.ಓ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಡಾ.ಕುಮಾರ ಅಂಗಡಿ ಮಾತನಾಡಿ, ಕಾಶಿಯ ಬನಾರಸ್ ವಿ.ವಿ. ಯಲ್ಲಿ ೧೯೭೭ ರಲ್ಲಿ ಸ್ಥಾಪನೆಯಾದ ನಮ್ಮ ಸಂಘಟನೆ ರಾಷ್ಟಸೇವೆ ಮತ್ತು ಸ್ವಾಸ್ಥ ಸೇವೆಗಳ ಉದ್ದೇಶ ಹೊಂದಿದೆ. ವನವಾಸಿಗಳ ಅನಾರೋಗ್ಯ ಚಿಕಿತ್ಸೆ ಮಾತ್ರವಲ್ಲದೇ, ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಬೆರೆತು ಮಾತನಾಡುವುದೂ ನಮ್ಮ ಕಾರ್ಯಕ್ರಮದ ಭಾಗವೇ ಆಗಿದೆ ಎಂದು ಹೇಳಿ ಸಂಘಟನೆಯ ಕುರಿತು ವಿವರಿಸಿದರು.
ಎನ್.ಎಂ.ಓ ಅ.ಭಾ ಸಹಕಾರ್ಯದರ್ಶಿ ಡಾ||ಗೀತಾ ಉತ್ತೂರು ವೇದಿಕೆಯಲ್ಲಿದ್ದರು.
ವ್ಯಾಸರಾಜ್ ಸ್ವಾಗತಿಸಿ, ನಿರ್ವಹಿಸಿದರು. ವನವಾಸಿ ಕಲ್ಯಾಣ ಶಿರಸಿ ಜಿಲ್ಲಾ ಶೈಕ್ಷಣಿಕ ಪ್ರಮುಖ ಬಾಬು ಕಾತ್ರಾಟ್ ವಂದಿಸಿದರು.
ಯಲ್ಲಾಪುರ, ಮುಂಡಗೋಡು ಹಾಗೂ ಶಿರಸಿ ತಾಲೂಕುಗಳ ೫೩ ವನವಾಸಿ ಗ್ರಾಮಗಳ ಸಿದ್ಧಿ, ದನಗರ ಗೌಳಿ, ಕುಂಬ್ರಿ ಮರಾಠಿ ಮತ್ತು ಕುಣಬಿ ಸಮುದಾಯಗಳ ನಿವಾಸಕ್ಕೆ ಸೇವಾ ಯಾತ್ರೆ ತೆರಳಿದ್ದು ಒಟ್ಟೂ ೧೨೮ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಮೂರು ದಿನಗಳ ಸೇವಾ ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯನಿರ್ವಹಿಸುವರು.




Prathidvani Yellapura