
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ: NPCIL ಕೈಗಾದವರು ನಿಗಮ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ಮಾವಿನಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ,ಸಮುದಾಯ ಭವನ,ಶಾಲೆ,ಬ್ರಿಜ್ ಮುಂತಾದ ಕಾಮಗಾರಿಯನ್ನು ಮಾವಿನಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡಿದ್ದು ಕಳೆದ ಹಲವಾರು ವರ್ಷಗಳಿಂದ ಕೆಲಸಗಳನ್ನು ಅತ್ಯುತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ.

ಈ ಸಾಲಿನಲ್ಲಿ ಮಲವಳ್ಳಿ ಬಂಕೊಳ್ಳಿ ಕಾಂಕ್ರೇಟ್ ರಸ್ತೆ ಕಾಮಗಾರಿಯನ್ನು NPCIL ಕೈಗಾರವರು ನಿರ್ವಹಿಸುತ್ತಿದ್ದು ಸಂಬಂಧಪಟ್ಟ ಇಂಜಿನೀಯರ್ ಗಳು ಸರಿಯಾಗಿ ಸ್ಥಳಪರಿಶೀಲಿಸದೆ ಕಾಮಗಾರಿ ತೀರಾ ಕಳಪೆಯಾಗಿರುತ್ತದೆ.ಸ್ಥಳೀಯ ಜನಪ್ರತಿನಿಧಿಗಳು ಭೇಟಿಕೊಟ್ಟಾಗ ಕಾಮಗಾರಿ ಪರಿಶೀಲಿಸಿದಾಗ ಸ್ಥಳೀಯ ಮುಖಂಡರು ಗುತ್ತಿಗೆದಾರರ ಪರವಹಿಸಿ ಕಾಮಗಾರಿಯನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.

ಕಾರಣ NPCIL ಕೈಗಾದ ಹಿರಿಯ ಅಧಿಕಾರಿಗಳು,ಸ್ಥಳೀಯ ಜನಪ್ರತಿನಿಧಿಗಳು,ಹಾಗೂ ಅರ್ಜಿದಾರರ ಸಮಕ್ಷಮ ಸ್ಥಳ ಪರಿಶೀಲಿಸಿ ಮತ್ತು ತಾಂತ್ರಿಕ ಪರಿಶೀಲನೆ ನಡೆಸಿ (ಗುಣಮಟ್ಟ ಪರಿಶೀಲನೆ) ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿ ಸ್ಥಳೀಯರ ವಿನಂತಿಯಾಗಿದೆ.
ಮಾವಿನಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ರಮನೆ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಳೆದ ಎರಡು ಮೂರು ವರ್ಷಗಳಿಂದ ಪೌಂಡೇಶನ್ ಮುಗಿಸಿ ಪಿಲ್ಲರ್ ಹಂತದಲ್ಲಿದ್ದು ಕಾಮಗಾರಿ ಅರ್ಧಕ್ಕೆ ನಿಂತಿರುತ್ತದೆ.ಹಳೆಯ ಶಾಲೆಯನ್ನು ಅರ್ಧ ಕಳಚಿದ್ದು ಮಳೆಗಾಲದಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ.ಕಾರಣ ಈ ಶಾಲೆಯ ಕಟ್ಟಡವನ್ನು ಪೂರ್ಣಗೊಳಿಸಬೇಕಾಗಿ ವಿನಂತಿಸುತ್ತೇವೆ ಎಂದು
ಮಾವಿನಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಾದ
ಸತ್ಯನಾರಾಯಣ ಹೆಗಡೆ ರಾಘವೇಂದ್ರ ಭಟ್ಟ ತಂಗಜ್ಜಿಮನೆ ತಿಮ್ಮಣ್ಣ ಭಟ್ಟ ರಾಘವೇಂದ್ರ ಕುಣುಬಿ ಪರಮೇಶ್ವರಕುಣುಬಿ ಎಂಬುವರು ಮಧ್ಯಮದ ಮೂಲಕ ವಿನಂತಿಸಿದ್ದಾರೆ.
Prathidvani Yellapura