
ಯಲ್ಲಾಪುರ : ತಾಲೂಕು ಸರ್ಕಾರಿ ಆಸ್ಪತ್ರೆ ಜಿಲ್ಲೆಯಲ್ಲೆ ಉತ್ತಮ ಗುಣಮಟ್ಟದ ಚಿಕಿತ್ಸೆ, ಸ್ವಚ್ಚತೆ, ಹಾರೈಕೆ ನೀಡುವ ಆಸ್ಪತ್ರೆ ಎಂಬ ಹೆಗ್ಗಳಿಕೆಯೊಂದಿಗೆ ಪ್ರಸೂತಿಯಲ್ಲಿಯು ಒಳ್ಳೆಯ ಹೆಸರು ತಂದುಕೊಂಡಿದೆ,ಅಂತಹ ಸೇವೆ ನೀಡುತ್ತಿದ್ದ ಡಾ,ದೀಪಕ್ ಭಟ್ ವರ್ಗಾವಣೆ ಆಗಿದ್ದು ಅವರಿಂದ ತೆರವಾದ ಸ್ಥಾನಕ್ಕೆ ಬೇರೆ ವೈದ್ಯರನ್ನು ಇನ್ನೂ ನಿಯೋಜಿಸದಿರುವುದು ಆತಂಕಕಾರಿಯಾಗಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಮಾಜಿ ಅಧ್ಯಕ್ಷ ಜಗನ್ನಾಥ ರೇವಣ್ಕರ್ ಆತಂಕ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಒಂದೆಡೆ ಶಾಸಕ ಹೆಬ್ಬಾರ್ ಅವರ ಇಚ್ಛಾಶಕ್ತಿ ಆಸ್ಪತ್ರೆಗೆ ಬೇಕಾದ ಸಕಲ ವ್ಯವಸ್ಥೆ ಕಲ್ಪಿಸಿ ಆಸ್ಪತ್ರೆ ಬಗ್ಗೆ ವಿಶೇಷ ಆಸಕ್ತಿ ತೋರುತ್ತ ತಾವು ಅಲ್ಲಿಯೆ ಚಿಕಿತ್ಸೆ ಪಡೆದು ಅಧಿಕಾರಿ ಜನಪ್ರತಿನಿಧಿಗಳಿಗೆ ಅಲ್ಲಿಯೆ ಚಿಕಿತ್ಸೆ ಪಡೆಯುವಂತೆ ಪ್ರೋತ್ಸಹಿಸುತ್ತಿದ್ದರು, ಮತ್ತು ತಮ್ಮ ಆಸ್ಪತ್ರೆ ಎಂಬ ಹೆಗ್ಗಳಿಕೆ ಅವರಲ್ಲಿತ್ತು ಅಂತಹ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಬೇಕಾದ ಸ್ರೀರೋಗ ತಜ್ಞರ ನಿಯೋಜನೆ ತಡವಾಗುತ್ತಿದ್ದು ಸರ್ಕಾರ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿನ ಒತ್ತಡಹಾಕಿ ಬೇರೆ ವೈದ್ಯರನ್ನು ನಿಯೋಜಿಸಬೇಕಿದೆ,
ಸದ್ಯ ಆಸ್ಪತ್ರೆಯಲ್ಲಿ ಇರುವ ವೈದ್ಯರು ಹಾಗು ನುರಿತ ಶುಶ್ರೂಷಕಿಯರು ಪ್ರಸೂತಿ ಕಾರ್ಯ ನಿರ್ವಹಿಸುತ್ತಿದ್ದು ಗಂಭೀರ ಹಾಗು ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಪ್ರಕರಣಗಳನ್ನು ಬೇರೆಡೆಗೆ ಸೂಚಿಸುತ್ತಿದ್ದಾರೆ ಇದು ಕೂಡ ಪ್ರಶಂಸನೀಯ ಕಾರ್ಯವಾಗಿದ್ದು ಸರ್ವರಿಗು ನಾಗರಿಕರ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
Prathidvani Yellapura