
ಪ್ರತಿಧ್ವನಿ ಯಲ್ಲಾಪುರ – ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಡಾಂಬರ್ ಟ್ಯಾಂಕರ್ ಗಾಡಿ ಗುದ್ದಿದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಪ್ರಾಣ ಬಿಟ್ಟ ಘಟನೆ ಗುರುವಾರ ನಡೆದಿದೆ.

ಮುಂಡಗೋಡು ತಾಲೂಕು ಬಾಚಣಕಿ ಮೂಲದ ಹಾಲಿ ಕಾರವಾರದ ಬಾಡದಲ್ಲಿ ವಾಸವಿದ್ದು ಹೋಂ ಗಾಡ್೯ ವೃತ್ತಿ ಮಾಡುತ್ತಿದ್ದ ಪರಶುರಾಮ ಕಲ್ಲಪ್ಪ ಬಾರಕೇರ ( 39 ) ಎಂಬಾತನೆ ಮೃತ ಬೈಕ್ ಸವಾರನಾಗಿದ್ದು ಕಾರವಾರದಿಂದ ಮುಂಡಗೋಡು ಕಡೆಗೆ ತೆರಳುತ್ತಿದ್ದನ್ನು ಈ ವೇಳೆ ಯಲ್ಲಾಪುರದ ಕಡೆಯಿಂದ ಕಾರವಾರದ ಕಡೆಗೆ ತೆರಳುತ್ತಿದ್ದ ಡಾಂಬರ್ ಸಾಗಿಸುವ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೆ ಬಿದ್ದು ಮೃತಪಟ್ಟಿರುತ್ತಾನೆ.
ಈ ಸಂಬಂಧ ಡಾಂಬರ್ ಟ್ಯಾಂಕರ್ ಚಾಲಕ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬೊಮ್ಮನಹಳ್ಳಿ ನಿವಾಸಿ ಅಶೋಕ ಮಹದೇವಪ್ಪ ಹರಿಜನ ಎಂಬಾತನ ಮೇಲೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



Prathidvani Yellapura