
ಪ್ರತಿಧ್ವನಿ ಯಲ್ಲಾಪುರ (ಬೆಂಗಳೂರು): ಜನಶಕ್ತಿ ವೇದಿಕೆಯ ಅಧ್ಯಕ್ಷ ಅಜ ಸೇವಕ ಮಾಧವ ನಾಯಕ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ನಿವಾಸದಲ್ಲಿ ಅವರನ್ನು ಭೇಟಿಯಾದಾಗ, ನ್ಯಾ. ಹೆಗ್ಡೆಯವರು ತಮ್ಮ ಕುಟುಂಬದ ಘಟನೆಯೊಂದನ್ನು ನೆನೆದು ಭಾವುಕರಾದರು. “ನನಗೆ ಈಗ 86 ವರ್ಷ ವಯಸ್ಸಾಯಿತು. ನನ್ನ ಅಣ್ಣ ಕಳೆದ ಜನವರಿ 2ರಂದು ಆಕಸ್ಮಿಕವಾಗಿ ಬಿದ್ದು ಮೃತಪಟ್ಟರು,” ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.
ಇದೇ ವೇಳೆ ಮಾಧವ ನಾಯಕ ಅವರು ಕಾರವಾರ ಭಾಗದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಹೆಗ್ಡೆ ಅವರ ಗಮನ ಸೆಳೆದರು. ವಿಶೇಷವಾಗಿ ಕಾರವಾರದ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಮೂಲಸೌಕರ್ಯಗಳ ಕೊರತೆ ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚಿಸಿದರು.





Prathidvani Yellapura