
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಾಪುರ ಹೆಸ್ಕಾಂ ವತಿಯಿಂದ ” ಹೆಸ್ಕಾಂ ಪವರ್ ಕಪ್ – 2026 ” ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯವನ್ನು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮಾಕಾಂತ ನಾಯ್ಕಉದ್ಘಾಟಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಛಾಯಪ್ಪ ಮುರಡಿ ಆಟಗಾರರನ್ನುಪರಿಚಯಿಸಿದರು.ಸಹಾಯಕ ಲೆಕ್ಕಾಧಿಕಾರಿ ವಿನಯ್ ಶೇಟ್ ಆಟಗಾರರನ್ನು ಅಭಿನಂದಿಸಿದರು

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಶೇಖರ್, ಮಂಚಿಕೇರಿ ಶಾಖಾಧಿಕಾರಿ ನಾಗರಾಜ್ ಆಚಾರಿ,ಕಿರುವತ್ತಿ ಶಾಖಾಧಿಕಾರಿ ವಿಶಾಲ್, ಗ್ರಾಮೀಣ ಶಾಖಾಧಿಕಾರಿ ಲಕ್ಷ್ಮಣ ಜೋಗಳೇಕರ, ಲೇಕ್ಕಾಧಿಕಾರಿ ವಿನಾಯಕ ಶೇಟ,ಕಂದಾಯ ಇಲಾಖೆಯ ವಿನಯ ನಾಯ್ಕ, ಹಾಗೂ ನಿರ್ಣಾಯಕರಾಗಿ ನೀಲಕಂಠ, ವಿಕ್ರಮ್, ಸ್ಕೋರರ್ ನವಾಜ್ ಕಾರ್ಯ ನಿರ್ವಹಿಸಿದರು.


ಸೌಹಾರ್ಧಯುತವಾಗಿ ಪ್ರಾರಂಭವಾದ ಕ್ರಿಕೇಟ್ ಪಂದ್ಯಾವಳಿ ಪ್ರತಿ ಪಂದ್ಯಗಳು ರೋಚಕವಾಗಿದ್ದವು. ಕೊನೆಯಲ್ಲಿ ಫೈನಲ್ ಪಂಧ್ಯ ರಾಯಲ್ ರೆವಿನ್ಯೂ ಮತ್ತು ಮಂಚಿಕೇರಿ ಚಾಲೆಂಜರ್ಸ್ ತಂಡಗಳ ನಡುವೆ ಮೈ ನವಿರೇಳಿಸುವಂತಹ ಪ್ರದರ್ಶನಕ್ಕೆ ಸಾಕ್ಷಿಯಾಯಿತು ಅಂತಿಮವಾಗಿ ರಾಯಲ್ ರೆವಿನ್ಯೂ ತಂಡ ಗೆಲುವಿನ ನಗೆ ಬೀರಿ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಮಂಚಿಕೇರಿ ಚಾಲೆಂಜರ್ಸ್ ತಂಡ ಕಠಿಣ ಸವಾಲು ಎದುರಿಸಿ ದ್ವಿತೀಯ ಸ್ಥಾನ ಪಡೆಯಿತು.

ಪಂದ್ಯಾವಳಿ ಯಲ್ಲಿ ಒಟ್ಟು 6 ತಂಡಗಳು ಸೆಣೆಸಾಟ ನಡೆಸಿದವು ಕೊನೆಯಲ್ಲಿ ರಾಯಲ್ ರೆವಿನ್ಯೂ ತಂಡ ಜಯಶಾಲಿಯಾಗಿ ಪ್ರಥಮ ಸ್ಥಾನ ಪಡೆದರೆ ರನ್ನರ್ ಅಪ್ ಆಗಿ ಮಂಚಿಕೇರಿ ಚಾಲೆಂಜಸ್೯ ದ್ವಿತೀಯ ಸ್ಥಾನ ಪಡೆದರು.











Prathidvani Yellapura