
ಪ್ರತಿಧ್ವನಿ ಯಲ್ಲಾಪುರ : ಪ್ರತಿ ವರ್ಷದಂತೆ ಈ ವರ್ಷವು ಅರಣ್ಯ ಇಲಾಖೆ ಆವರಣದಲ್ಲಿ ಪರಿಸರ ಸ್ನೇಹಿ ಮತ್ತು ಪರಿಸರ ಜಾಗೃತಿ ಗಣಪನನ್ನು ಪ್ರತಿಷ್ಟಾಪಿಸಿ ಆರಾಧಿಸುತ್ತಿದ್ದು ಭಕ್ತಿಯೊಂದಿಗೆ ಜಾಗೃತಿ ಮೂಡಿಸುತ್ತಿರುವ ಗಣಪನನ್ನು ಕಾಣಲು ಯಲ್ಲಾಪುರ ಪಟ್ಟಣ ಮತ್ತು ಅಕ್ಕಪಕ್ಕದ ಹಳ್ಳಿಗಳಿಂದಲು ಭಕ್ತರು ಆಗಮಿಸಿ ಗಣಪನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಅರಣ್ಯ ಇಲಾಖೆ ಗಜಾನನೋತ್ಸವ ಸಮಿತಿ ಯಲ್ಲಾಪುರ ವತಿಯಿಂದ ಸತತವಾಗಿ ಐದು ದಿನಗಳ ಕಾಲ
” ಮಾನವ-ವನ್ಯಜೀವಿ ಸಂಘರ್ಷ ತಡೆಯೋಣ,ಸಹಬಾಳ್ವೆಯ ಭವಿಷ್ಯ ಬಾಳೋಣ “ -ಎಂಬ ಧ್ಯೇಯ ವ್ಯಾಖ್ಯಾನಡಿ ಗಣಪತಿಯ ಆರಾಧನೆ ಜರುಗುತ್ತಿದೆ.

ವಿಭಾಗೀಯ ಕಚೇರಿಯ ಆವರಣದಲ್ಲಿ ಪ್ರವೇಶ ದ್ವಾರದಿಂದ ಗಣೇಶನ ಮಂಟಪದವರೆಗೂ ದಾರಿಯುದ್ಧಕ್ಕೂ ಜನಜಾಗೃತಿ ಮೂಡಿಸುವ ಫಲಕಗಳು ಅಳವಡಿಸಿ ಜನರಿಗೆ ಜಾಗೃತಿ ಮೂಡಿಸಲಾಗಿದೆ.

ಗಣೇಶನ ವೇದಿಕೆಗೆ ಮಾನವ – ವನ್ಯಜೀವಿ ಸಂಘರ್ಷದ ಕುರಿತು ಜನಜಾಗೃತಿ ಮೂಡಿಸುವ ಹಿನ್ನೆಲೆಯನ್ನು ಅಳವಡಿಸಿ ಸಾರ್ವಜನಿಕ ಭಕ್ತಾದಿಗಳಲ್ಲಿ ಅರಿವು ಮೂಡಿಸಿ ತುಂಬಾ ಅರ್ಥಪೂರ್ಣವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ.











Prathidvani Yellapura