
ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡಿನಲ್ಲಿ ಹಳೂರು ಓಣಿಯಲ್ಲಿ ಮಾರಿಕಾಂಬ ದೇವಸ್ಥಾನದ ಅನ್ನ ಛತ್ರ ನಿರ್ಮಿಸಲು ಉದ್ದೇಶಿಸಿದ್ದು ಅದರ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು. ಅನ್ನ ಛತ್ರದ ನಿರ್ಮಾಣ ಕಾರ್ಯದಲ್ಲಿ ವಿವಿಧ ರೂಪದಲ್ಲಿ ಸಹಕಾರ ನೀಡುತ್ತಿರುವ ಬಿಜೆಪಿ ಯುವ ನಾಯಕ
ಉದ್ಯಮಿ ಬಾಲಕೃಷ್ಣ ನಾಯಕ್ ಅವರನ್ನು ಸಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು
ವೇ.ಮೂ.ಲಕ್ಷ್ಮಿನಾರಾಯಣ ಭಟ್ ನೇತೃತ್ವದಲ್ಲಿ ನಡೆದ ಶಿಲನ್ಯಾಸ ಕಾರ್ಯಕ್ರಮದಲ್ಲಿ ವೇ.ಮೂ.ರುದ್ರಮುನಿ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದಿನದಿಂದ ದಿನಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸದ್ದಿಲ್ಲದಂತೆ ಬಿಜೆಪಿ ಯುವ ನಾಯಕ ಕೊಡುಗೈ ದಾನಿ ಸಮಾಜಸೇವಕ ಬಾಲಕೃಷ್ಣ ನಾಯಕ್ ಹೆಸರು ಎಲ್ಲೆಲ್ಲು ಮಾರ್ದನಿಸುತ್ತಿದೆ. ಇದು ಬರಲಿರುವ ವಿಧಾನ ಸಭಾ ಚುನಾವಣೆಯ ರಣ ಕಣಕ್ಕೆ ರಂಗು ತುಂಬುವ ಪ್ರಯತ್ನ ಸಾಗಿದಂತೆ ಕಂಡುಬರುತ್ತಿದೆ.

ಕೊಡುಗೈ ದಾನಿ ಸಮಾಜ ಸೇವಕರೆಂದೇ ಖ್ಯಾತರಾದ ಯಲ್ಲಾಪುರದ ಯುವ ಉದ್ಯಮಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಗುಸು ಗುಸು ಸುದ್ದಿ ಹರಡುತ್ತಿರುವ ಬೆನ್ನಲ್ಲೆ ಬಾಲಕೃಷ್ಣ ನಾಯಕ್ ಸದ್ದಿಲ್ಲದ್ದಂತೆ ತಮ್ಮ ಸಹಾಯ ಸಹಕಾರ ಕ್ಷೇತ್ರ ಪರ್ಯಟನೆ ಸಾಗಿಸಿದ್ದಾರೆ.

ಯಲ್ಲಾಪುರದಲ್ಲಿ ಪ್ರಚಲಿತದಲಿದ್ದ ಕೊಡುಗೈ ದಾನಿ ಖ್ಯಾತಿ ಪಕ್ಕದ ಮುಂಡಗೋಡು ಭಾಗಕ್ಕು ವಿಸ್ತರಿಸುತಿದ್ದು ನಿಧಾನವಾಗಿ ರಾಜಕೀಯ ಪಯಣಕ್ಕೆ ಮುನ್ನುಡಿ ಬರೆಯುತ್ತಿರುವಂತೆ ಭಾಸವಾಗುತ್ತಿದೆ ಎನ್ನುತ್ತಿದ್ದಾರೆ ರಾಜಕಾರಣದ ವಿಷ್ಲೇಷಕರು.




Prathidvani Yellapura