
ಕೇಬಲ್ ನಾಗೇಶ್, ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿ ದೊಡ್ಡ ಯಲವಳ್ಳಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು 860 ಗ್ರಾಂ ತೂಕ 50 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.

ದೊಡ್ಡ ಯಲವಳ್ಳಿ ನಿವಾಸಿ 64 ವರ್ಷ ವಯೋಮಾನದ ಬೈಯ್ಯ ವಾಗು ಕೊಕರೆ ಎಂಬಾತನೆ ಗಾಂಜಾ ಮಾರುತ್ತಿದ್ದ ವ್ಯಕ್ತಿಯಾಗಿದ್ದು ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿದ ಯಲ್ಲಾಪುರ ಪೊಲೀಸ್ ತಂಡ ಆರೋಪಿಯನ್ನು ಮಾಲಿನ ಸಹಿತ ಹಿಡಿದು ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಎನ್ ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ ಹಾಗು ಪೊಲೀಸ್ ಉಪಾಧೀಕ್ಷೆ ಗೀತಾ ಪಾಟೀಲ ಮಾರ್ಗದರ್ಶನದಲ್ಲಿ, ಪಿ.ಐ. ರಮೇಶ್ ಹಾನಾಪುರ ನೇತೃತ್ವದಲ್ಲಿ ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬ್ಳೆ, ಶೇಡಜಿ ಚವ್ಹಾಣ್ ಹಾಗು ಸಿಬ್ಬಂದಿಗಳಾದ ಪ್ರೊಭೆಷನರಿ ಪಿ.ಎಸ್.ಐ ಶರಣಬಸವ, ಎ.ಎಸ್.ಐ ದೀಪಕ್ ಸೋಮವಂಶಿ, ಸಿ.ಹೆಚ್.ಸಿ ಉಮೇಶ ತುಂಬರಗಿ, ಸಿಪಿಸಿ ಸಂತೋಷ ಬಾಳೇರ, ಸುರೇಶ ಕಂಟ್ರಾಕ್ಟರ್, ಡಿ.ಕೆ.ಬಸವರಾಜ ಕೆ.ಹೆಚ್.ಮಾರುತಿ, ಆರೋಪಿ ಬಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲರನ್ನು ಉತ್ತರ ಕನ್ನಡ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.


Prathidvani Yellapura