
ಪ್ರತಿಧ್ವನಿ ಯಲ್ಲಾಪುರ : ಭಾರತೀಯ ಜನಗಣತಿ ಮಹಾಕಾರ್ಯದ ಪ್ರಯುಕ್ತ ಮನೆಗಣತಿಗು ಮುನ್ನ ಪೂರ್ವಭಾವಿಯಾಗಿ ನಡೆಯುತ್ತಿರುವ ” ಸ್ವಯಂಗಣತಿ ಕಾರ್ಯಕ್ಕೆ ” ಮಾನ್ಯ ಶಾಸಕರಾದ ಶಿವರಾಮ ಹೆಬ್ಬಾರ್ ಅವರ ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮನೆಗಣತಿ ಕಾರ್ಯವು ಜನಗಣತಿಯ ಪ್ರಮುಖ ಹಂತವಾಗಿದ್ದು ವಿಶೇಷವಾಗಿ ಸ್ವಯಂ ಗಣತಿ ಕಾರ್ಯ ಏ,1 ರಿಂದ 15 ರ ವರೆಗೆ ನಡೆಯುತ್ತಿದ್ದು ಸಾರ್ವಜನಿಕರು ಸ್ವಯಂ ಗಣತಿಗೆ ಅವಕಾಶವಿದೆ. ಪ್ರತಿಯೊಬ್ಬ ನಾಗರಿಕರು ನಿಖರವಾದ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವನಜಾಕ್ಷಿ ಶಿವರಾಮ ಹೆಬ್ಬಾರ್, ತಹಶಿಲ್ದಾರರ ಚಂದ್ರಶೇಖರ ಕಮ್ಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.




Prathidvani Yellapura