Breaking News

ಹೋಳಿ ಬಣ್ಣದೋಕುಳಿ ಹೊಸ್ತಿಲಲ್ಲಿ ಕಣ್ಣೀಗೆರೆ ಪಂಚಾಯತ್ ವ್ಯಾಪ್ತಿಯಲ್ಲಿ ” ಸುಗ್ಗಿ ಕುಣಿತ “


ಯಲ್ಲಾಪುರ : ಪೂರ್ವಜರ ಕಾಲದಿಂದಲು ಹೋಳಿ ಹಬ್ಬಕ್ಕು ಮುನ್ನ ಸುಗ್ಗಿ ಕುಣಿತ ನೆರವೇರಿಸುತ್ತಾ ಬಂದಿದ್ದು ಸ್ಥಳೀಯ ದೇವತೆಗಳ ಅಪ್ಪಣೆ ಪಡೆದು ರಣಗಳನ್ನು ಎಬ್ಬಿಸಿ ಸುಗ್ಗಿ ಕುಣಿತ ಆಯೋಜಿಸಲಾಗುತ್ತದೆ ಅದರಂತೆ ಕಣ್ಣೀಗೆರೆ ಪಂಚಾಯತ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಸುಗ್ಗಿ ಕುಣಿತ ಸದ್ದು ಮಾಡುತ್ತಿದೆ.


ಹಿಂದಿನವಕಾಲದ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪದ್ದತಿ ಪರಂಪರೆಗಳನ್ನು ಇಂದಿನ ಪೀಳಿಗೆಯವರು ಅಳವಡಿಸಿಕೊಂಡು ಮುಂದೆ ಸಾಗುತ್ತಿರುವುದು ನೆಲದ ಸಂಸ್ಕೃತಿಗಳ ರಕ್ಷಣೆಯಾಗಿದೆ.

ಐದು ದಿನಗಳಿಂದ ತಮ್ಮ ಊರು ಮತ್ತು ಮನೆಗಳನ್ನು ಬಿಟ್ಟು ಸುಗ್ಗಿ ಕುಣಿತದಲ್ಲಿ ಪಾಲ್ಗೊಳ್ಳುತ್ತರೆ ಐದು ದಿನಗಳ ನಂತರ ತಮ್ಮ ಮನೆ ಸೇರುತ್ತಾರೆ. ಬಣ್ಣದ ಧಿರಿಸು ಧರಿಸಿ ನಡುಮದ್ಯದಲ್ಲಿ ತುಳಸಿ ಇರಿಸಿ ಮರಾಠಿ ಭಕ್ತಿ ಭಜನೆಗೆ ತಾಳದೊಂದಿಗೆ ಹೆಜ್ಜೆ ಹಾಕುತ್ತ ಸುಗ್ಗಿ ಕುಣಿತ ಮಾಡುತ್ತಾರೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಜಾನಪದ ಸೊಗಡನ್ನು ಮೈಗೂಡಿಸಿಕೊಂಡ ಸುಗ್ಗಿಕುಣಿತ ನೋಡುಗರ ಗಮನ ಸೆಳೆಯುತ್ತಿದ್ದು ಆಕರ್ಷಣೆ ಪಡೆದಿದೆ..

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಹುಬ್ಬಳ್ಳಿ-ಅಂಕೊಲಾ ರೈಲ್ವೆ ಪರಿಸರಕ್ಕೆ ಕೊಳ್ಳಿ ಇಡುವ ಯೋಜನೆ – ಶಂಶುದ್ದೀನ್ ಮಾರ್ಕರ್ ಸಾಮಾಜಿಕ ಹೋರಾಟಗಾರ.

ಪ್ರತಿಧ್ವನಿ ಯಲ್ಲಾಪುರ : ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗು ವಿವಿಧ ಮಾಧ್ಯಮಗಳಲ್ಲಿ ಹುಬ್ಬಳ್ಳಿ- ಅಂಕೋಲ ರೈಲ್ವೆ ಯೋಜನೆಗೆ ಇದ್ದ …

Leave a Reply

Your email address will not be published. Required fields are marked *