
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮದನೂರು ಪಂಚಾಯತ್ ಮತ್ತು ಕಿರವತ್ತಿ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆಗೆ ಗಂಗೆ ಜಲಜೀವನ್ ಮಿಷನ್ ಯೋಜನೆ ನಿಷ್ಪ್ರಯೋಜನವಾಗಿದೆ. ಅಲ್ಕೇರಿ ಗೌಳಿವಾಡ ಎಂಬಲ್ಲಿ ಮನೆಮನೆಗೆ ಗಂಗೆ ಎಂಬ ಕಲ್ಪನೆಯಲ್ಲಿ ನಿರ್ಮಿಸಿದ ಬೃಹತ್ ನೀರಿನ ಟ್ಯಾಂಕ್ ಕಟ್ಟಿದಂದಿನಿಂದ ಇಂದಿಗು ನೀರನ್ನೆ ಕಾಣದೆ ಖಾಲಿಖಾಲಿ ನಿಂತಿದೆ.ಅಂದಿನ ಕಾಲಕ್ಕೆ ಈ ಗ್ರಾಮ 82 ಮನೆಗಳಿಗೆ ನಳ ಕಲ್ಪಿಸುವ ಉದ್ದೇಶ ಹೊಂದಿತ್ತು ಇಂದಿಗು ನೀರು ಕೊಡದೆ ಅಪ್ರಯೋಜನವಾಗಿದೆ.

ಸುಮಾರು 30 ಲಕ್ಷದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ ನೀರಿಲ್ಲದ ಮೇಲೆ ಪ್ರಯೋಜನವಿಲ್ಲದಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ಗಂಗೆ ಎನ್ನುತ್ತ ಇಂದಿಗು ಇಲ್ಲಿನ ಜನ ನೀರಿಗಾಗಿ ಹಾಹಾಕರ ಅನುಭವಿಸುತ್ತಿದ್ದಾರೆ.
ಇಲ್ಲಿನ ಶಾಲೆಯ ಕಾಂಪೌಂಡ್ ಒಳಗಿನ ಕೊಳವೆ ಬಾವಿಯಿಂದ ಒಂದು ಎರಡು ಕೊಡಪಾನ ಕುಡಿಯುವ ನೀರು ಪಡೆಯುವ ದಯನೀಯ ಪರಿಸ್ಥಿತಿ ಇದ್ದರು ಇಂದಿಗು ಜಲಜೀವನ್ ಮಿಷನ್ ಅಡಿ ನಿರ್ಮಿಸಿದ ಟ್ಯಾಂಕ್ ನಿಂದ ನೀರು ಹರಿಸದಿರುವುದು ವ್ಯವಸ್ಥೆಯ ವೈಪಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಇದು ಕೇವಲ ಅಲ್ಕೇರಿ ಗೌಳಿವಾಡ ಒಂದು ಗ್ರಾಮದ ಕಥೆಯಲ್ಲ ಹುಣಸಗೇರಿ,ಮಂಗ್ಯಾನ ತಾವರಗೇರಿ ಯಲ್ಲೂ ಸೇರಿದಂತೆ ಇನ್ನೂ ಕೆಲವು ಇದೇಕಥೆ ಇದೇವ್ಯಥೆಯಲ್ಲಿದೆ. ಯಾವುದೆ ಯೋಜನೆಗಳು ಜನರ ಉಪಯೋಗಕ್ಕೆ ಬರುವಂತಿರಬೇಕು. ಜನರ ತೆರಿಗೆ ಹಣ ಬಳಸಿ ನಿರುಪಯುಕ್ತ ಯೋಜನೆ ಅನುಷ್ಟಾನಕ್ಕೆ ಮುಂದಾಗುವುದನ್ನು ಇನ್ನಾದರು ನಿಲ್ಲಿಸಬೇಕಿದೆ.
ಸಂಬಂಧಿಸಿದ ಇಲಾಖೆ ತಕ್ಷಣ ಗಂಭೀರವಾಗಿ ಗಮನಹರಿಸಿ ಖಾಲಿ ಬಿದ್ದಿರುವ ಟ್ಯಾಂಕ್ ಗಳಿಗೆ ನೀರು ತಬಿಸುವ ಕಾರ್ಯ ಮಾಡಬೇಕಿದ್ದು ಜನರ ಆಕ್ರೋಶ ಬುಗಿಲೇಳುವ ಮುನ್ನ ಅವ್ಯವಸ್ಥೆ ಸರಿಪಡಿಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಈ ಸಮಸ್ಯೆ ಕುರಿತು ಸರಿಯಾಗಿ ಇಂದಿಗೆ ಒಂದು ವರ್ಷದ ಹಿಂದೆ ಜಯ ಕರ್ನಾಟಕ ಸಂಘಟನೆಯ ಅಡಿಯಲ್ಲಿ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿ ಪರಿಸ್ಥಿತಿ ಗಂಭೀರತೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಆದರೆ ಇದಾವುದನ್ನು ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದು ಇಂದಿಗೆ ವರ್ಷ ಕಳೆದರು ಸಮಸ್ಯೆ ಬಗೆ ಹರಿಸಿಲ್ಲ ಸಾರ್ವಜನಿಕರು ಬೆವರುಸುರಿಸಿ ದುಡಿದ ಹಣದಲ್ಲಿ ಸರ್ಕಾರಕ್ಕೆ ವಿವಿಧ ರೂಪದಲ್ಲಿ ತೆರಿಗೆ ಭರಣ ಮಾಡುವ ಉದ್ದೇಶ ಮೂಲಭೂತ ಸೌಕರ್ಯಗಳನ್ನು ಅನುಷ್ಟಾನ ಗೊಳಿಸಲಿ ಎಂದು ಆದರೆ ಜನರಿಗೆ ಯೋಜನೆಗಳು ಉಪಯೋಗಕ್ಕೆ ಬರದ ಮೇಲೆ ಪ್ರಯೋಜನವೇನು.ಇನ್ನಾದರು ಕುಂಭಕರ್ಣ ನಿದ್ರೆಯಿಂದ ಎಚ್ಚೆತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಇಲ್ಲವಾದಲ್ಲಿ ಜಯಕರ್ನಾಟಕ ಸಂಘಟನೆ ಅಡಿಯಲ್ಲಿ ಜಲಜೀವನ್ ಮಿಷನ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
ವಿಲ್ಸನ್ ಫರ್ನಾಂಡೀಸ್, ಜಯಕರ್ನಾಟಕ ಸಂಘಟನೆ
ಕಿರವತ್ತಿ.
ಯೋಜನೆ ರೂಪುಗೊಂಡಿರುವುದು ಮಾತ್ರ ಬಡ ಕುಟುಂಬಗಳ ನೀರಿನ ದಾಹ ನೀಗಲು. ಇಂದಿಗು ಅಲ್ಕೇರಿ ಗೌಳಿವಾಡದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ. ಟ್ಯಾಂಕ್ ಕಟ್ಟಿದ ಮೇಲೆ ನೀರಿನ ಮೂಲ ಹುಡುಕಿ ಕೊಳವೆ ಬಾವಿ ಕೊರೆಸಿದರು ಅದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಿ ನೀರು ಹರಿಸದೆ ಹಾಗೆ ಬಿಟ್ಟಿರುವುದು ದುರಂತವಾಗಿದೆ. ಇದರಿಂದ ಯಾವುದೆ ಜನಪರ ಯೋಜನೆಗಳ ಮೇಲೆ ಜನರಿಗೆ ನಂಬಿಕೆ ಇಲ್ಲದಾಗಿ ಖಾಲಿ ಹೊಡೆಯುತ್ತಿರುವ ಬೃಹತ್ ನೀರಿನ ಟ್ಯಾಂಕ್ ನಗೆಪಾಟಲಿಗೆ ಗುರಿಯಾಗಿದೆ.
ಜಿಮ್ಮು ಬಾಬು ಜೋರೆ, ಸ್ಥಳೀಯ ನಿವಾಸಿ, ಜಯ ಕರ್ನಾಟಕ ಸಂಘಟನೆ ಸ್ಥಳೀಯ ಪ್ರಮುಖ.





Prathidvani Yellapura