
ಪ್ರತಿಧ್ವನಿ ಯಲ್ಲಾಪುರ : ಉಮ್ಮಚಗಿ ಭಾಗದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸುಭಾಷ ಗಜಾನನ ಪಟಗಾರ, ಲಕ್ಷ್ಮಣ ವಾಲಿಕರ, ಗಣೇಶ ಬಾಬು ವಡ್ಡರ್ ಹಾಗೂ ಸಂಕದಗುಂಡಿಯ ಮಂಜುನಾಥ ಎಚ್. ವಡ್ಡರ್ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಕುಪ್ಪಯ್ಯ ಪೂಜಾರಿ ಹಾಗೂ ಮಂಜುನಾಥ ಮೋಗೆರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬೇಟಿಯಾಗಿ ತಮ್ಮ ಗ್ರಾಮದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

















Prathidvani Yellapura