Breaking News

ಕಾಲು ಶತಮಾನ ಕಂಡ ಯು.ಕೆ ಸೌಹಾರ್ಧ ಸಹಕಾರಿ – 1 ಕೋಟಿ,14 ಲಕ್ಷ ಲಾಭದಲ್ಲಿ – ಪ್ರಮೋದ್ ಹೆಗಡೆ.


ಪ್ರತಿಧ್ವನಿ ಯಲ್ಲಾಪುರ :  ಯು.ಕೆ.ಸೌಹಾರ್ದ ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 1.14 ಕೋಟಿ ರೂ ಎಲ್ಲ ನಿಧಿಗಳನ್ನು ತೆಗೆದಿಟ್ಟು ಲಾಭ ಗಳಿಸಿದೆ. 22,448 ಶೇರುದಾರರನ್ನು ಹೊಂದಿದ್ದು, 7,70 ಕೋಟಿ ಶೇರು ಬಂಡವಾಳ ಹೊಂದಿ, ಕಾಲು ಶತಮಾನ ಗತಿಸಿದ ನಮ್ಮ ಸಂಸ್ಥೆ ಸಮಾನ ಮನಸ್ಕರ ತಂಡದಿದಾಗಿ ಅಭಿವೃದ್ಧಿಯನ್ನು ಹೊಂದಿದೆ. ಜನರ ಸಹಕಾರ, ಪ್ರೀತಿ ನಮ್ಮ ಸಂಸ್ಥೆಯ ಮೇಲಿರುವುದರಿಂದಲೇ ಉತ್ತಮ ಪ್ರಗತಿಯನ್ನು ಸಾಧಿಸುವುದಕ್ಕೆ ಸಾಧ್ಯವಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು, ಶುಕ್ರವಾರ ಪಟ್ಟಣದ ಅಡಿಕೆಭವನದಲ್ಲಿ 25 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
229 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ಭದ್ರತೆಗಾಗಿ 9.98 ಕೋಟಿ ನಿಧಿಗಳನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ತೆಗೆದಿಡಲಾಗಿದೆ. 11.13 ಕೋಟಿ ಸಾಲ ಪಡೆದಿದ್ದು, ಸದಸ್ಯರ ಠೇವು 2೦೦ ಕೋಟಿಗೂ ಹೆಚ್ಚಿದೆ. ಅಂತೆಯೇ 150 ಕೋಟಿ ಸಾಲ ನೀಡಲಾಗಿದೆ. ವಾರ್ಷಿಕವಾಗಿ 2288 ಕೋಟಿ ವಾರ್ಷಿಕ ವ್ಯವಹಾರದ ಪ್ರಗತಿಯಲ್ಲಿರುವ ನಮ್ಮ ಸಂಸ್ಥೆ ಪ್ರಧಾನ ಕಚೇರಿ, ಸ್ವಂತ ಕಟ್ಟಡ, 11 ಶಾಖೆಗಳು, ಪಿಗ್ಮಿ ಸಂಗ್ರಹದವರನ್ನೂ ಸೇರಿಸಿ 80 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿದೆ ಎಂದು ವಿವರಿಸಿದರು.
ತಾಲೂಕಿನಲ್ಲಿ ಈಗಾಗಲೇ 35 ಬ್ಯಾಂಕುಗಳು ಆರ್ಥಿಕ ವ್ಯವಹಾರವನ್ನು ನಡೆಸುತ್ತಿದ್ದಾರೆ. ಯಲ್ಲಾಪುರದಲ್ಲಿ ಸಾವಿರಾರು ಕೋಟಿ ಠೇವಿದೆ. ಇದರಿಂದ ಎಲ್ಲ ಸಂಸ್ಥೆಗಳು ಸಶಕ್ತವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಸಂಸ್ಥೆ 5 ಕೋಟಿ ರೂ ಆಸ್ತಿಯನ್ನು ಹೊಂದಿದೆ. ಆರ್ಥಿಕ ಶಿಸ್ತಿನ ಚೌಕಟ್ಟಿನಲ್ಲೇ ನಡೆದಿರುವುದರಿಂದ ಅಢಾವೆಯ ಪ್ರಗತಿಗಾಗಿ ಹೊಂದಾಣಿಕೆ ಮಾಡಿಕೊಳ್ಳದೇ ಪ್ರಗತಿಯಲ್ಲಿ ನಡೆದಿದ್ದೇವೆ. ಮಾರ್ಚ್ ನಂತರ ನಿರೀಕ್ಷೆ ಮೀರಿ ಪ್ರಗತಿಯನ್ನು ಸಾಧಿಸಿದ್ದೇವೆ. ಅಲ್ಲದೇ ಗ್ರಾಹಕರಿಗೆ ತೀರಾ ಅಗತ್ಯವಾದ ವಿದೇಶಿ ಹಣ ವರ್ಗಾವಣೆ, ಪ್ರವಾಸಿಗರಿಗೆ ಟಿಕೇಟು ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ನಮ್ಮ ಸಂಸ್ಥೆ ನೀಡುತ್ತಿದೆ. ತನ್ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಇದರಿಂದ ಊರಿನ ಪ್ರಗತಿಗೆ ಕಾರಣವಾಗಿದೆ ಎಂದು ಮಾಹಿತಿ ನೀಡಿದರು.
ಸಹಕಾರಿಗಳಾದ ಡಿ.ಶಂಕರ ಭಟ್ಟ, ಕೃಷ್ಣಮೂರ್ತಿ ಹೆಗಡೆ ಚರ್ಚೆಯಲ್ಲಿ ಪಾಲ್ಗೊಂಡರು.
ಲೆಕ್ಕ ಪರಿಶೋಧಕರಾದ ಸಿ.ಎ ಎಸ್.ಜಿ.ಹೆಗಡೆ ಶಿರಸಿ ಸಾಂದರ್ಭಿಕವಾಗಿ ಮಾತನಾಡಿದರು. ಸಲಹೆಗಾರರಾದ ಪಿ.ಜಿ.ಹೆಗಡೆ, ನಿರ್ದೇಶಕರಾದ ರಮೇಶ ಪ್ರಸಾದ, ಮಹಾಬಲೇಶ್ವರ ಹೆಗಡೆ, ನಾಗೇಂದ್ರ ಭಟ್ಟ, ಸದಾನಂದ ಭಟ್ಟ, ನಾರಾಯಣ ಗಾಂವ್ಕರ, ತಿಮ್ಮಣ್ಣ ಭಟ್ಟ, ಮೆಹಬೂಬ ಮುಲ್ಲಾ, ನಾರಾಯಣ ಉಡದಂಗಿ, ದೇಮಣ್ಣ ಕೇಸರಕರ, ಭಾಸ್ಕರ ಸಿದ್ದಿ, ರಾಜೇಶ್ವರಿ ಭಟ್ಟ, ಆಶಾ ಪಟೇಲ, ಪ್ರಶಾಂತ ಹೆಗಡೆ, ಪರಮೇಶ್ವರ ಹೆಗಡೆ, ಎನ್.ಜಿ.ಕಿರಣ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸುಬ್ಬಯ್ಯ ಧೋಗಳೆ ಸ್ವಾಗತಿಸಿದರು. ನಿರ್ದೇಶಕ ರವಿ ಭಟ್ಟ ನಿರ್ವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *