

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಲಾರಿ ಚಾಲಕರ ಸಂಘದ ವತಿಯಿಂದ ಸಿಹಿ ಹಂಚಿ ಬಾಯಿ ಸಿಹಿ ಮಾಡಲಾಯಿತು.

ದೇಶಕ್ಕೆ 80 ನೆ ವರ್ಷದ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ತ್ರಿವರ್ಣ ಧ್ವಜದ ಹಾರಾಟ ಇಂತಹ ಸಂತಸದ ಸನ್ನಿವೇಶದಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಲಾರಿ ಚಾಲಕರ ಸಂಘ ಬದ್ದತೆಯ ಕಾರ್ಯ ಮಾಡಿದರು.

ಸಂಘದ ಅಧ್ಯಕ್ಷ ಸಂತೋಷ ನಾಯ್ಕ್ ಮಾರ್ಗ ದರ್ಶನದಲ್ಲಿ.ಉಪಾಧ್ಯಕ್ಷ ಶಂಕರ್ ಅತ್ತರವಾಲ, ಕಾರ್ಯದರ್ಶಿ ಸಂದೀಪ್ ವಡ್ಡರ್ ಹಾಗು ಪ್ರಮುಖರಾದ ಅಲ್ತಾಫ್,ಶ್ರೀನಿವಾಸ, ಆದಂ, ತಂಜಿಮ್ ಸೇರಿದಂತೆ ಇನ್ನಿತರರು ಪಾಲ್ಗೊಂಡು ಸಿಹಿ ಹಂಚಿದರು.


















Prathidvani Yellapura