
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ: ವೀರ ಸಾವರ್ಕರ್ ಪ್ರತಿಮೆ ಅನಾವರಣ ಸಮಿತಿ ವಜ್ರಳ್ಳಿ ಹಾಗೂ ಸಾವರ್ಕರ್ ವಿಚಾರ ಪ್ರಚಾರ ಸಮಿತಿ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಏ.20 ರಂದು ವಜ್ರಳ್ಳಿಯ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ಪುಸ್ತಕ ಬಿಡುಗಡೆ, ಉಪನ್ಯಾಸ ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ವಿ.ಎನ್.ಭಟ್ ವಜ್ರಳ್ಳಿ ತಿಳಿಸಿದರು.

ಅವರು ಶನಿವಾರ ಪಟ್ಟಣದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

`ವಜ್ರಳ್ಳಿಯಲ್ಲಿ ಸ್ವಾತಂತ್ರವೀರ ಸಾವರ್ಕರ್ ಅವರ ಪ್ರತಿಮೆ ಸ್ಥಾಪನೆಯಾಗಬೇಕು, ಅವರ ವಿಚಾರವನ್ನು ತಾಲ್ಲೂಕಿನ ಮನೆ ಮನೆಗೆ ತಲುಪಿಸಬೇಕು; ಆ ಮೂಲಕ ಯುವಕರಲ್ಲಿ ದೇಶಾಭಿಮಾನ ಮೂಡಿಸಬೇಕು ಎಂಬುದು ಸಮಿತಿಯ ಉದ್ದೇಶ. ಸಮಿತಿ ಈ ನಿಟ್ಟಿನಲ್ಲಿ ಉಪನ್ಯಾಸ, ಸಾವರ್ಕರ್ ಸಂದೇಶದ ಕಿರು ಹೊತ್ತಿಗೆ ಪ್ರಕಟಣೆ ಮುಂತಾದ ಅನೇಕ ಕಾರ್ಯಯೋಜನೆ ಹಮ್ಮಿಕೊಂಡಿದೆ’ ಎಂದು ಹರಿಪ್ರಕಾಶ್ ಕೋಣೆಮನೆ ವಿವರಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಗಣಪತಿ ಭಟ್ , ಹರಿಪ್ರಕಾಶ ಕೋಣೆಮನೆ , ಎನ್ ಎಸ್ ಹೆಗಡೆ ಕರ್ಕಿ , ಪತ್ರಕರ್ತ ಅಜಿತ್ ಹನುಮಕ್ಕನವರ್, ರಾಮಕೃಷ್ಣ ಹೆಬ್ಬಾರ ಭಾಗವಹಿಸಲಿದ್ದಾರೆ ಎಂದು ಸಮಿತಿಯವರು ಮಾಹಿತಿ ನೀಡಿದರು.
ಲೇಖಕ ಹರಿಪ್ರಕಾಶ ಕೋಣೇಮನೆ, ಸಮಿತಿಯ ಕಾರ್ಯದರ್ಶಿ ಮಹೇಶ ಗಾಂವ್ಕರ, ಪ್ರಮುಖರಾದ ಪ್ರಸಾದ ಹೆಗಡೆ, ಗಣಪತಿ ಮಾನಿಗದ್ದೆ, ವಿಶ್ವನಾಥ ಹಳೆಮನೆ ಇದ್ದರು.



Prathidvani Yellapura