



ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರದ ನಾಯಕನ ಕೆರೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದತ್ತಮಂದಿರಕ್ಕೆ ಸ್ಥಳಿಯ ನಿವಾಸಿ ವೇಣುಗೋಪಾಲ ಮದ್ಗುಣಿಯವರು ಒಟ್ಟು 1,22,221/- (ಒಂದು ಲಕ್ಷದ ಇಪ್ಪತ್ತೇರಡು ಸಾವಿರದ ಎರಡನೂರಾಇಪ್ಪತ್ತೋಂದು ರೂಪಾಯಿ ) ದೇಣಿಗೆ ನೀಡಿದ್ದಾರೆ.ಅವರು ತಮ್ಮ ತಂದೆ ಹಾಗೂ ಹಿಂದಿನ ಶೀವಾನಂದ ಸ್ವಾಮಿಯವರ ಸ್ನೇಹದ ದ್ಯೋತಕವಾಗಿ ಈ ಹಣವನ್ನು ನೀಡಿದ್ದಾರೆ. ದತ್ತಮಂದಿರಕ್ಕೆ ಹಿಂದಿನಿಂದಲೂ ಭಕ್ತರಾಗಿರುವ ಇವರು ಮಂದಿರವನ್ನು ರಾಮಚಂದ್ರಾಪುರ ಮಠ ವಹಿಸಿಕೊಂಡ ದಿನದಿಂದಲೂ,ಕಳೆದ ಹದಿನಾರು ವರ್ಷಗಳಿಂದ ದತ್ತ ಜಯಂತಿಗೆ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ. ಮುಂದಿನ ದಿನಗಳಲ್ಲಿಯು ಹೆಚ್ಚಿನ ಸೇವೆ ಸಲ್ಲಿಸುವಂತಾಗಲೆಂದು ದತ್ತಭಕ್ತರು ಆಶಿಸಿದ್ದಾರೆ.




Prathidvani Yellapura