


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ –ಬಹುದಿನಗಳಿಂದ ಕಾಣಿಸದ ಗಾಂಜಾ ಘಾಟು ಯಲ್ಲಾಪುರದಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು ಶುಕ್ರವಾರ ಮಾರಾಟಕ್ಕಾಗಿ ಗಾಂಜಾ ಸಾಗಿಸುವ ವೇಳೆ ಮಾಲಿನ ಸಹಿತ ಐವರು ಪೆಡ್ಲರ್ ವಶಕ್ಕೆ ಪಡೆಯಲಾಗಿದೆ.

ಯಲ್ಲಾಪುರ ಪಟ್ಟಣದ ನೂತನ ನಗರ ನಿವಾಸಿಗಳಾದ ಹಣ್ಣಿನ ವ್ಯಾಪಾರಿ ಸೈಯದ್ ನಹೀಮ್ ಸೈಯದ್ ಮಹ್ಮದ್ ( 28 ) ,
ಆದಿಲ್ ಮೀರ ಆದಂ ಮೀರ ಮುನಾಫ್ ( 18 ) , ಮಲ್ಲಿಕ್ ರೆಹಾನ್ ಹರುಣ ಶೇಖ್ ( 28) , ಉದ್ಯಮ ನಗರ ಬಟ್ಟೆ ವ್ಯಾಪಾರಿ ಪವನ್ ಸರ್ವೇಶ್ ಬನ್ಸೋಡೆ ( 21), ಮಾಲು ಲಕ್ಕು ಲಾಬೋರ (20) ಎಂಬ ಐದು ಮಂದಿ ಯುವಕರನ್ನೆ ಗಾಂಜಾ ಸಾಗಿಸುವ ವೇಳೆ ವಶಕ್ಕೆ ಪಡೆದಿರುವುದು.

10 ಸಾವಿರ ಮೌಲ್ಯದ 565 ಗ್ರಾಂ ಗಾಂಜಾ, 2600 ನಗದು, 20 ಸಾವಿರ ಮೌಲ್ಯದ 4 ಮೊಬೈಲ್, 4 ಲಕ್ಷ ಮೌಲ್ಯದ ಐ 20 ಕಾರು ಒಟ್ಟು 4 ಲಕ್ಷದ 32 ಸಾವಿರದ 600 ರುಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದು N.D.P.S 1985 ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಯಕುಮಾರ , ಜಗದೀಶ ನಾಯ್ಕ ಹಾಗೂ ಶಿರಸಿ ಪೊಲೀಸ್ ಉಪಾಧೀಕ್ಷಕ ಗಣೇಶ್ ಕೆ.ಎಲ್ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ರಮೇಶ್ ಎಚ್ ಹಾನಾಪುರ ನೇತೃತ್ವದಲ್ಲಿ ಪಿಎಸ್ಐಗಳಾದ ಸಿದ್ದು ಗುಡಿ, ನಿರಂಜನ ಹೆಗಡೆ, ವಿನೋದ ರಾಜ, ನಸ್ರೀನ್ ತಾಜ್, ಎಎಸ್ಐ ವಿಠ್ಠಲ ಮಲವಡಕರ ಮತ್ತು ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ್ ಶಫಿ, ರಾಘವೇಂದ್ರ ನಾಯಕ, ಸಂತೋಷ ನಾಯ್ಕ, ಗಿರೀಶ್ ಲಮಾಣಿ, ಪರಶುರಾಮ ಕಾಳೆ, ಬೆನಕ ನಾಯಕ, ಮುತ್ತು ಲಮಾಣಿ, ಅಮರ್ ಜಿ, ಕೃಷ್ಣಾ ಮಾತ್ರೋಜಿ, ಶೋಭಾ ನಾಯ್ಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.



Prathidvani Yellapura