

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಣ್ಣೀಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳಿಕೇರಿ ಗ್ರಾಮದ ಗೌಂಟಿ ಕೆರೆ ಒಡ್ಡಿನಲ್ಲಿ ಕಂದಕ ಬಿದ್ದಿದ್ದು ನಾಲ್ಕು ಎಕರೆ ವಿಸ್ತೀರ್ಣದ ಕೆರೆಯು ಅಪಾಯಕಾರಿಯಾಗಬಲ್ಲದಾಗಿದೆ.

ಗೌಂಟಿ ಕೆರೆ ಸುಮಾರು ನಾಲ್ಕುಎಕರೆಗು ಹೆಚ್ಚು ವಿಸ್ತೀರ್ಣ ಹೊಂದಿದ್ದು ಸುತ್ತಮುತ್ತಲಿನ ರೈತರ ತೋಟ ಗದ್ದೆಗಳಿಗೆ ಮತ್ತು ಜಾನುವಾರುಗಳಿಗೆ ಜೀವಜಲವಾಗಿದೆ. ಇಂತಹ ಜನೋಪಯೋಗಿ ಬೃಹತ್ ಕೆರೆ ಅತಿಕ್ರಮಣಕ್ಕೆ ಬಲಿಯಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದ್ದು ತನ್ನ ವ್ಯಾಪ್ತಿ ಕಳೆದುಕೊಂಡಿದೆ. ಕಳೆದ 6 ತಿಂಗಳ ಹಿಂದೆ ನ್ಯಾಯಾಲಯದ ನಿರ್ಧೇಶನದಂತೆ ಗ್ರಾಮೀಣ ಭಾಗದಲ್ಲಿನ ಕಂದಾಯ, ಜಿಲ್ಲಾ ಪಂಚಾಯತ ಇಂಜನಿಯರಿಂಗ್ ಉಪ ವಿಭಾಗದ ಅಧೀನದಲ್ಲಿದ್ದ ಕೆರೆಗಳನ್ನು ಗ್ರಾಮ ಪಂಚಾಯತ್ ಸುಪರ್ಧಿಗೆ ನೀಡಿದ್ದು ಸದ್ಯ ಗ್ರಾಮ ಪಂಚಾಯತದಿಂದ ಸರ್ವೆ ಇಲಾಖೆಗೆ ಮಾಹಿತಿನೀಡಿ ಕೆರೆಯ ವಿಸ್ತೀರ್ಣ ವ್ಯಾಪ್ತಿ ಅಳೆದು ಗಡಿಗುರುತು ಮಾಡಿಕೊಡುವಂತೆ ಪತ್ರ ಬರೆದಿದ್ದು ಆ ಕೆಲಸಗಳು ಪ್ರಗತಿಯಲ್ಲಿದೆ.
ಕೆರೆಯ ಸದ್ಯದ ಪರಿಸ್ಥಿತಿ ನೋಡಿದರೆ ದಂಡೆ ಹೆಚ್ಚು ಬಾಳಿಕೆ ಬರುವಂತೆ ಕಂಡುಬರುತ್ತಿಲ್ಲ. ಕೆರೆಯ ಕೆಳ ಭಾಗದಲ್ಲಿ ನೂರಾರು ಎಕರೆ ತೋಟ ಗದಗದೆಗಳಿದ್ದು ಅಪಾಯಕಾರಿ ಸ್ಥತಿಯಲ್ಲಿದೆ. ಕೆರೆಯ ಪಾತ್ರದಲ್ಲಿ ಭತ್ತ,ಜೋಳ,ಕಬ್ಬು,ಅಡಕೆ ತೆಂಗು,ಬಾಳೆ ಇನ್ನಿತರ ವಾಣಿಜ್ಯ ಹಾಗು ಆಹಾರ ಬೆಳೆಗಳನ್ನು ಬೆಳೆಯಲಾಗಿದ್ದು ಎಲ್ಲವನ್ನು ಕೆರೆ ಆಪೋಷಣ ತೆಗೆದುಕೊಳ್ಳುವ ಸಾದ್ಯತೆ ಇದೆ. ಹಾಗೆಂದು ತರಾತುರಿಯಲ್ಲಿ ಕಟ್ಟೆಕಟ್ಟಲು ಹೋದರೆ ಶ್ರಮವೆಲ್ಲ ವ್ಯರ್ಥವಾಗುವುದಲ್ಲದೆ ಗಟ್ಟಿತನ ಬರುವುದಿಲ್ಲ. ತುರ್ತಾಗಿ ತಾತ್ಕಾಲಿಕ ಕಾಮಗಾರಿ ಮಾಡಿ ಮಳೆಗಾಲದ ನಂತರ ಶಾಶ್ವತ ಕಾಮಗಾರಿ ನಡೆಸಬೇಕಿದೆ ಎಂಬುದು ತಿಳಿದವರ ಅಭಿಪ್ರಾಯವಾಗಿದೆ.
ಪ್ರಮುಖಾಂಶಗಳು
•• ಈ ಸಂಬಂಧ ವಾಡ್೯ ಸಭೆಯಲ್ಲಿ ಕೆರೆಗೆ ಕಾಯಕಲ್ಪ ಕೊಡುವ ವಿಚಾರದ ಚರ್ಚೆಯಾಗಿದೆ.
• ಗ್ರಾಮದಲ್ಲಿರುವ ಏಕೈಕ ಕೆರೆ ಇದಾಗಿದೆ.
• ತೋಟ ಗದ್ದೆಗಳಿಗಲ್ಲದೆ ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರುಣಿಸುವ ಜೀವಜಲ ಈ ಕೆರೆ ಯಾಗಿದೆ.
• ಸರ್ಕಾರಿ ದಾಖಲೆಯಲ್ಲಿ ಉಲ್ಲೇಖವಾದಷ್ಷು ವಿಸ್ತೀರ್ಣದಲ್ಲಿ ಅತಿಕ್ರಮಣವಾಗಿದ್ದರೆ ಖುಲ್ಲಾಪಡಿಸಿ ಗಡಿಗುರುತು ಮಾಡಿ ಭವಿಷ್ಯದ ಪೀಳಿಗೆಗೆ ಕೆರೆಗಳನ್ನು ರಕ್ಷಿಸುವ ಕಾರ್ಯವಾಗಬೇಕಿದೆ.
• ಕೆರೆಯೊಳಗಿನ ಕೆಸರು ಮಣ್ಣನ್ನೆ ತೆಗೆದು ದಡಕ್ಕೆ ಹಾಕಿ ನಾಮಕಾವಾಸ್ತೆ ಕೆಲಸ ಮಾಡದೆ ಶಾಶ್ವತ ಕಾಮಗಾರಿಗೆ ಒತ್ತು ನೀಡಬೇಕಿದೆ.
• ಸ್ಥಳೀಯ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ತೋಟಗದ್ದೆಗಳ ರೈತರನ್ನು ಒಳಗೊಂಡಂತೆ ಕೆರೆ ರಕ್ಷಣ ಸಮಿತಿ ರಚಿಸಿ ಕೆರೆಯ ರಕ್ಷಣೆಯ ಜವಾಬ್ದಾರಿ ನೀಡಬೇಕಿದೆ.
• ಅರಣ್ಯ ಇಲಾಖೆಯ ಸಹಾಯದಿಂದ ಕೆರೆಯ ಸುತ್ತಲು ಗಿಡಮರಗಳನ್ನು ಬೆಳೆಸುವ ಕಾರ್ಯವಾಗಬೇಕಿದೆ.
• ಒಂದಾನುವೇಳೆ ಕೆರೆ ಒತ್ತುವರಿ ಮಾಡಿದ್ದರೆ ಅಂತಹವರ ಮೇಲೆ ಕಾನೂನುಕ್ರಮ ಜರುಗಿಸಿ ಎಚ್ಚರಿಸಬೇಕಿದೆ.
ಗ್ರಾಮೀಣ ಭಾಗದಲ್ಲಿ ಕೆರೆಗಳೆ ನಮಗೆ ಜೀವಾಳ ಬೇಸಿಗೆಯಲ್ಲಂತು ಜಾನುವಾರುಗಳು ನೂರಾರು ಸಂಖ್ಯೆಯಲ್ಲಿ ಬಂದು ದಾಹ ತೀರಿಸಿಕೊಂಡು ಹೋಗುತ್ತವೆ. ಮತ್ತು ಸುತ್ತಮುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಏರಿಕೆಯಲ್ಲಿ ಗಾಂಟಿ ಕೆರೆ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ರಕ್ಷಸಿ ಇದರ ಪ್ರಯೋಜನ ಪಡೆದು ಬರಲಿರುವ ಮುಂದಿನ ಪೀಳಿಗೆಗೆ ಉಳಿಸಿಕೊಟ್ಟು ಹೋಗಬೇಕಿದೆ ಆದ್ದರಿಂದ ಕೆರೆಯ ದಡ ಒಡೆಯದಂತೆ ಬಂದೋಬಸ್ತ್ ಮಾಡಬೇಕಿದೆ.
ಸ್ಥಳಿಯ ನಾಗರಿಕರು
ಕಳೆದ ತಿಂಗಳಲ್ಲಿ ಬಾರಿ ಮಳೆ ಸುರಿದ ಸಂದರ್ಭದಲ್ಲಿ ಕೆರೆಯ ಒಡ್ಡಿನಲ್ಲು ಕಂದಕ ಬಿದ್ದಿರುವುದು ಗಮನಕ್ಕೆ ಬಂತು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದ್ದು ಸದ್ಯಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ ಆದರೆ ಭವಿಷ್ಯದಲ್ಲಿ ಅಪಾಯವಿದ್ದು ಮಳೆಗಾಲ ಮುಗಿಯುತ್ತಲೆ ಶಾಶ್ವತ ಕಾಮಗಾರಿ ಮಾಡಬೇಕಿದೆ ಅದಕ್ಕಾಗಿ ನರೇಗಾ ಯೋಜನೆಯ ಅಡಿಯಲ್ಲಿ ಸೇರಿಸಲಾಗಿದೆ. ಸದ್ಯ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರಕ್ಕೆಕ್ರಮಕೈಗೊಳ್ಳಲಾಗುವುದು. ಶಿವಕುಮಾರ ವಿರಕ್ತಮಠ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
Prathidvani Yellapura