
ಪ್ರತಿಧ್ವನಿ,ಯಲ್ಲಾಪುರ-ಚುನಾವಣೆ ಮುಗಿದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಯಾರಾಗಬೇಕೆಂದು ಮತದಾರ ತನ್ನ ನಿರ್ಧಾರವನ್ನು ಅದಾಗಲೆ ದಾಖಲಿಸಿ ಪೆಟ್ಟಿಗೆಯೊಳಗೆ ಜೋಪಾನವಾಗಿರಿಸಿದ್ದಾನೆ ನಾಳೆ 9 ಮಂದಿ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ.

ಇಷ್ಟೆಲ್ಲಾ ಒತ್ತಡವಿದ್ದರು ಸಚಿವ ಹೆಬ್ಬಾರ್ ಅವರಿಗೆ ಪಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಜೊತೆ ಕಾರ್ಯಕರ್ತರ ಜೊತೆ ಕುಳಿತು ಮಾತನಾಡುತ್ತ ಸಮಯ ಕಳೆದರು. ಸಚಿವರ ಹಲವು ವಿಶೇಷತೆಗಳಲ್ಲಿ ಇದು ಒಂದು ಎಷ್ಟೇ ಒತ್ತಡ ಸಮಸ್ಯೆಗಳಿದ್ದರು ಎಲ್ಲವನ್ನು ಜನರ ಮದ್ಯೆ ಬೆರೆತು ಕಳೆದುಬಿಡುತ್ತಾರೆ. ಸದ್ಯ ನಡೆದ ವಿಧಾನಸಭಾ ಚುನಾವಣಾ ಪಲಿತಾಂಶ ನಾಳೆ ಹೊರಬೀಳಲಿದ್ದು ಯಾವುದೆ ಆತಂಕ ವಿಲ್ಲದೆ ಎಂದಿನಂತೆ ಮಂದಹಾಸದಲ್ಲಿ ಜನರನ್ನು ಮಾತನಾಡಿಸುತ್ತಾ ಅವರದ್ದೆ ಮನೆಯ ಹೊರಾಂಡದಲ್ಲಿ ಕುಳಿತು ರಿಲ್ಯಾಕ್ಸ ಮೂಡ್ ನಲ್ಲಿದ್ದಾರೆ.

ಚುನಾವಣೆ ಘೋಷಣೆಯಾದಾಗಿನಿಂದ ಕ್ಷೇತ್ರದ ಜನರ ಆಶಿರ್ವಾದಕ್ಕಾಗಿ ಸಂಚರಿಸಿದ್ದೇನೆ ಜನ ನನ್ನನ್ನು ಆಶಿರ್ವದಿಸಿ ಮತ್ತೊಮ್ಮೆ ಅವರ ಸೇವೆಗೆ ಅಪ್ಪಣೆ ನೀಡಿದ್ದಾರೆ ಅದರಲ್ಲಿ ಯಾವುದೆ ಸಂದೇಹವಿಲ್ಲ. ಚುನಾವಣೆಯಲ್ಲಿ ತಮ್ಮ ಜವಾಬ್ದಾರಿಯುತ ಕರ್ತವ್ಯವಾದ ಮತ ಚಲಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಜನರಿಗು. ಶಾಂತಿಯುತ ಮತದಾನಕ್ಕೆ ಕಾರಣೀರ್ಕರಾದ ಅಧಿಕಾರಿಗಳು ಸಿಬ್ಬಂದಿಗಳು ಹಾಗು ಹಗಲಿರುಳು ದುಡಿದ ಕಾರ್ಯಕರ್ತರಿಗು ನಾನು ಋಣಿಯಾಗಿದ್ದೇನೆ. ಯಾವುದೆ ಗೊಂದಲ ಆತಂಕವಿಲ್ಲದೆ ವಿಜಯೋತ್ಸವದ ತಯಾರಿಯ ಚಿಂತನೆಯಲಿದ್ದೇನೆ ಎಂದು ಗೆಲುವಿನ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಸಚಿವ ಶಿವರಾಮ ಹೆಬ್ಬಾರ್.





Prathidvani Yellapura