Breaking News

ಯಲ್ಲಾಪುರ ಅಂಬೇಡ್ಕರ್ ನಗರದ ಸರ್ಕಲ್ ನಲ್ಲಿ ಕುಸಿಯುವ ಭೀತಿಯಲ್ಲಿದೆ ಹಳೆಯ ಮನೆ – ಜನರೆ ಎಚ್ಚರ.!!


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ನಗರದ ಅಕ್ಬರ್ ಅಂಗಡಿ ಸರ್ಕಲ್ ನಲ್ಲಿ ಚಚ್೯ ರಸ್ತೆಯಲ್ಲಿರುವ ಕಲಾಲ್ ಕುಟುಂಬಕ್ಕೆ ಸೇರಿದ ನೂರಕ್ಕು ಅಧಿಕ ವರ್ಷಗಳ ಹಿಂದಿನ ಹಳೆಯ ಮನೆಯೊಂದು ನಿಧಾನವಾಗಿ ಕುಸಿಯುತ್ತಲಿದ್ದು ಅಪಾಯದ ಮಟ್ಟಕ್ಕೆ ತಲುಪಿದೆ.


ಸದ್ಯ ಕುಸಿಯುವ ಸ್ಥಿತಿಯಲ್ಲಿರುವ ಹಳೆಯ ಮನೆಯಲ್ಲಿ ಇಲ್ಲಿಯವರೆಗು ವಾಸವಾಗಿದ್ದ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ,ಆದರೆ ಮನೆಯ ಹಿಂಬಾಗದ ಮಚ್ಚೀಗಲ್ಲಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುತ್ತಿದ್ದಾರೆ,ಕಾರಣ ಮನೆಯ ಗೋಡೆಯ ಇಟ್ಟಿಗೆಗಳು ನಿಧಾನವಾಗಿ ಕಳಚಿ ಬೀಳುತ್ತಿದೆ. ಈಗಾಗಲೆ ಬಹಳಷ್ಟು ಕುಸಿತವಾಗಿದೆ, ಇದೇ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸಂಚರಿಸುವ ವೇಳೆಯಲ್ಲಿ ಗೊಡೆ ಏಕಾಏಕಿ ಕುಸಿದರೆ ಪ್ರಾಣಾಪಾಯ ಸಂಭವಿಸಲಿದೆ.


ಮನೆಯ ಮಾಲಿಕರು ಅಪಾಯದಲ್ಲಿರುವ ಮನೆಯನ್ನು ತೆರವುಗೊಳಿಸಿ ಅಪಾಯ ತಪ್ಪಿಸಬೇಕು ಇಲ್ಲವಾದಲ್ಲಿ ಸ್ಥಳೀಯ ಆಡಳಿತ ಪಟ್ಟಣ ಪಂಚಾಯತ್ ಗಮನಹರಿಸಿ ಕುಸಿಯುತ್ತಿರುವ ಮನೆಯನ್ನು ತೆರವುಗೊಳಿಸುವುದು ಅಥವಾ ಎಚ್ಚರಿಕೆ ಫಲಕ ಅಳವಡಿಸುವುದು ಮನೆಯ ಸಾಮಾಗ್ರಿಗಳು ರಸ್ತೆ ಮೇಲೆ ಬೀಳದಂತೆ ಏನಾದರು ಉಪಾಯ ಮಾಡಬೇಕಿದೆ, ಇಲ್ಲವಾದಲ್ಲಿ ಖಂಡಿತ ಇಲ್ಲೊಂದು ಅಪಾಯ ಕಾದಿದೆ.


ಸ್ಥಳೀಯ ಜನರು ಹೇಳುವಂತೆ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ನಡೆದಾಡಲು ಭಯವಾಗುತ್ತಿದೆ ಕಾರಣ ಯಾವ ಕ್ಷಣದಲ್ಲಿ ಮನೆ ಬೀಳಲಿದೆ ತಿಳಿಯದು ಮನೆಯವರು ಅಥವ ಸಂಬಂಧಿಸಿದ ಇಲಾಖೆ ಸಮಸ್ಯೆ ಬಗೆಹರಿಸಬೇಕಿದೆ ಎನ್ನುತ್ತಾರೆ.

ಒಂದು ವೇಳೆ ಈ ಪ್ರಕರಣದಲ್ಲಿ ಮನೆಯ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆಯಲಿದ್ದರೆ ಅಥವ ಕುಟುಂಬದ ಒಳಗಿನ ಸಮಸ್ಯೆಯಾಗಿ  ಜವಾಬ್ದಾರಿ ತಟಸ್ಥವಾಗಿದ್ದರೆ ಆಗುವ ಅನಾಹುತಕ್ಕೆ ಹೊಣೆ ಯಾರು.?? ಇದರಲ್ಲಿ ಯಾರಿಗು ಅನಾಹುತವಾಗಬಾರದು ಯಾವುದೆ ಅಹಿತಕರ ದುರ್ಘಟನೆ ನಡೆಯಬಾರದು. ನಿರ್ಲಕ್ಷದಿಂದ ಯಾವುದೆ ಜೀವಹಾನಿ ಸಂಭವಿಸಬಾರದು ಇದು “ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ” ಕಳಕಳಿ

ಮಾಹಿತಿಗಾಗಿ  ವೀಡಿಯೋ ವೀಕ್ಷಿಸಿ 👇

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *