
ಪ್ರತಿಧ್ವನಿ ಯಲ್ಲಾಪುರ : ಜನಸೇವೆ ಮಾಡುವ ಮನಸ್ಸಿದ್ದರೆ ಅಧಿಕಾರ ಇದ್ದರು ಅಧಿಕಾರ ಇರದಿದ್ದರು ಮಾಡಬಹುದು ಅದಕ್ಕೆ ಜ್ವಲಂತ ನಿದರ್ಶನ ಎಂದರೆ ಮಂಜುನಾಥ ನಗರದ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಎನ್ನಬಹುದಾಗಿದೆ.

ಸತೀಶ್ ನಾಯ್ಕ್ ತಾನು ಪ್ರತಿನಿಧಿಸುವ ಪಟ್ಟಣದ ಮಂಜುನಾಥನಗರ ನಿವಾಸಿ ಮಾರ್ಕೊಸ್ ಎಂಬ ಕಾರ್ಮಿಕ ಕಟ್ಟಡ ಕೆಲಸ ಮಾಡುವಾಗ ಅಫಘಾತ ಸಂಭವಿಸಿದ್ದು ಕೈ ಮುರಿದುಕೊಂಡು ಸಂಕಷ್ಟದಲಿದ್ದನು, ವಿಷಯ ತಿಳಿದ ಸತೀಶ್ ನಾಯ್ಕ್ ತಕ್ಷಣ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆ ( ಕ್ರಿಮ್ಸ) ನಲ್ಲಿ ದಾಖಲಿಸಲಾಗಿತ್ತು.

ಅಲ್ಲಿನ ವೈದ್ಯರು ಆಪರೇಷನ್ ಮಾಡಲು ಮುಂದಾಗಿದ್ದು ಅಗತ್ಯವಾಗಿದ್ದ O-ve ರಕ್ತದ ಹುಡಕಾಟದಲ್ಲಿ ನಿರಂತರ ಹುಡುಕಾಟ ನಡೆಸಿದರು ಸಿಗದಾಗಿತ್ತು, ಮತ್ತೆ ಯಲ್ಲಾಪುರದ ಸತೀಶ ನಾಯ್ಕ, ಸಾಯಿನಾಥ ಉಣಕಲ್, ಮಾರುತಿ ತಿನೇಕರ್ , ವಿಕ್ಟೋರಿಯಾ ಎಂಬುವರು ಎಷ್ಟೇ ಪ್ರಯತ್ನಿಸಿದರು O-ve ರಕ್ತದ ವ್ಯವಸ್ಥೆ ಯಾಗದೆ ಹತಾಶರಾಗಿದ್ದರು, ಈ ಸಂದರ್ಭದಲ್ಲಿ ಕಾರವಾರದ Blood Doners karwar watsup ಗ್ರುಪ್ ನ ಎಡ್ಮಿನ್ ವಿನಾಯಕ ನಾಯ್ಕ ಚೆಂಡಿಯಾ ಅವರಲ್ಲಿ ಕೇಳಿಕೊಂಡಾಗಾ ಅವರ ನಿರಂತರ ಪ್ರಯತ್ನದ ಫಲವಾಗಿ ಕಾರವಾರದ 112 ಪೋಲಿಸ್ ವಾಹನದ ಚಾಲಕ ಅನಂತ ನಾರಾಯಣ ನಾಯ್ಕ (ಬಾಡಾ, ಕುಮಟಾ)ಅವರನ್ನು ಸಂಪರ್ಕಿಸಿ ಅತಿ ವಿರಳವಾದ ರಕ್ತದ ವ್ಯವಸ್ಥೆ ಮಾಡಿಕೊಟ್ಟಿದ್ದು ಅಫಘಾತದಲ್ಲಿ ಗಾಯಗೊಂಡ ಮಾರ್ಕೋಸ್ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತಿ ವಿರಳವಾದ O-ve ರಕ್ತ ನೀಡಿದ 112 ಪೊಲೀಸ್ ವಾಹನ ಚಾಲಕ ಅನಂತ ನಾರಾಯಣ ನಾಯ್ಕ ಅವರ ಮಾನವೀಯತೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ರಕ್ತದ ವ್ಯವಸ್ತೆ ಮಾಡಿ ಕೊಟ್ಟ ವಿನಾಯಕ ನಾಯ್ಕ ಚಂಡಿಯಾ ಅವರಿಗೆ ರೋಗಿಯ ತಾಯಿ ಪ್ರಮಿಳಾ ಮತ್ತು ಕುಟುಂಬದವರು ಹಾಗು ವಿಶೇಷವಾಗಿ ಮಂಜುನಾಥ ನಗರ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಧನ್ಯವಾದ ತಿಳಿಸಿದ್ದಾರೆ.














Prathidvani Yellapura