
ಪ್ರತಿಧ್ವನಿ ಯಲ್ಲಾಪುರ : ಅವನದು ಕಾರ್ಪೆಂಟರ್ ವೃತ್ತಿ ತಾಲ್ಲೂಕಿನ ವಡೇಹುಕ್ಕಳಿ ಸಮೀಪ ಕನ್ನಡಗಲ್ ಚಿನ್ನೆಹುಕ್ಕಳ್ಳಿ ಗ್ರಾಮದವನು ಮದುವೆ ಒಲ್ಲೆ ಎಂದು ಮನೆಯಿಂದ ಕಾಲ್ಕಿತ್ತಿದ್ದಾನೆ ಅಣ್ಣನನ್ನು ಹುಡುಕಿಕೊಡಿ ಎಂದು ಕಾಣೆಯಾದವನ ತಮ್ಮ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಸತೀಶ ರಮೇಶ ಮಳಿಕ (26) ಎಂಬ ಯುವಕನೆ ಕಾಣೆಯಾದವನಾಗಿದ್ದು ತನ್ನ ತಮ್ಮವಿಷ್ಣು ಮಳಿಕನ ಮೊಬೈಲ್ ಗೆ ನನಗೆ ಮದುವೆ ಇಷ್ಟವಿಲ್ಲ ಎಂಬ ಮೆಸೇಜ್ ಒಂದನ್ನು ಮಾ,28 ರಂದು ಕಳಿಸಿ ಮನೆಯಿಂದ ಹೊರ ನಡೆದವನು ನೆಂಟರಿಷ್ಟರ ಮನೆಗು ಹೋಗದೆ, ಮರಳಿ ಮನೆಗು ಬಾರದೆ ಕಾಣೆಯಾಗಿದ್ದಾನೆ ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ವ್ಯಕ್ತಿ ಕಾಣೆಯಾದ ಕಲಂ ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು ಕಾಣೆಯಾದ ವ್ಯಕ್ತಿಯ ವಿವರಗಳನ್ನು ಮಾದ್ಯಮಕ್ಕೆ ಬಿಡುಗಡೆ ಮಾಡಿ ತಿಳಿದವರು ಕರೆ ಮಾಡುವಂತೆ ಕೋರಿದ್ದಾರೆ.











Prathidvani Yellapura