
ಪ್ರತಿಧ್ವನಿ ಯಲ್ಲಾಪುರ : ಲೋಕ್ ಅದಾಲತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಇತ್ಯರ್ಥ ಪಡಿಸಲು, ರಾಜಿ ಸಂಧಾನದ ಮೂಲಕ ಪ್ರಕರಣ ಬಗ್ಗೆ ಹರಿಸಿ ಸಾರ್ವಜನಿಕರ ಸಮಯ ಮತ್ತು ಆರ್ಥಿಕ ಹೊರೆ ತಪ್ಪಿಸಲು ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರ್ ಎಸ್ ಹೇಳಿದರು.

ಅವರು ದಿನಾಂಕ 19.9.2026 ರಂದು ನಡೆಯಲಿರುವ ಲೋಕ್ ಅದಾಲತ್ ಯಶಸ್ವಿಯಾಗಿಸುವ ಬಗ್ಗೆ ಚರ್ಚಿಸಲು ಯಲ್ಲಾಪುರದ ನ್ಯಾಯಾಲಯದ ಆವರಣದಲ್ಲಿ ಪೂರ್ವಭಾವಿ ಸಭೆಕರೆದು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷರಾದ ವಿ.ಟಿ.ಭಟ್ ವಕೀಲರು, ಅಪರ ಸರ್ಕಾರಿ ವಕೀಲರಾದ ಎನ್. ಟಿ.ಗಾಂವ್ಕಾರ್ ವಕೀಲರು ಎನ್.ಕೆ. ಭಾಗವತ್ ವಕೀಲರು ಮತ್ತು ಸಹಾಯಕ ಸರ್ಕಾರಿ ಅಭಿಯೋಜಕಿ ಝಿನತ್ ಬಾನು ಶೇಕ್ ಹಾಗೂ ಇತರ ನ್ಯಾಯವಾದಿಗಳು ಉಪಸ್ಥಿತರಿದ್ದರು.

ಎಲ್ಲಾ ಪಾನಲ್ ವಕೀಲರು ಹಾಗೂ ಪ್ಯಾರಾಲಿಗಲ್ ವ್ಯಾಲೆಂಟಿಯರ್ಸ್ ಹಾಗೂ ಪೊಲೀಸ್ ಅಧಿಕಾರಿಗಳು, ವಿವಿಧ ಬ್ಯಾಂಕುಗಳ ಹಾಗೂ ವಿವಿಧ ಸೊಸೈಟಿಗಳ ಅಧಿಕಾರಿಗಳು ,ಪಟ್ಟಣ ಪಂಚಾಯತ ,ತಾಲೂಕು ಪಂಚಾಯತ್ ಹಾಗು ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ಯಾನಲ್ ವಕೀಲೇ ಸರಸ್ವತಿ ಭಟ್ಟ ಸ್ವಾಗತಿಸಿದರು.














Prathidvani Yellapura