
ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ಸಂಘಟನೆ ಬಲವಾಗಿ ವಿರೋದಿಸುತ್ತದೆ ಈ ಸಂಬಂಧ ಯಾವುದೇ ಸಂಘಟನೆಗಳು ಹೋರಾಟಕ್ಕೆ ಮುಂದಾದರೆ ಅದಕ್ಕೆ ಅಖಿಲ ಕರ್ನಾಟಕ ಅಹಿಂದ ಸಂಘಟನೆ ಸಂಪೂರ್ಣ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದಾರೆ.
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಈ ವಿಚಾರ ಭವಿಷ್ಯದಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳನ್ನು ತಂದೊಡ್ಡಲಿದೆ. ಬಡ ಮಧ್ಯಮವರ್ಗದ ಜನರ ಬದುಕು ನಿತ್ಯ ದುಡಿಮೆಯ ಸಂಪಾದನೆಯಲ್ಲಿ ನಡೆಯುತ್ತದೆ. ನ್ಯಾಯಾಲಯ ಸಂಬಂದ ಮಂಗಳೂರು ಹೋಗಿ ಬರಲು ಆಗುವ ವೆಚ್ಚ,ಸಮಯ ಎಲ್ಲವು ಬದುಕಿನ ಮೇಲೆ ಬರೆ ಎಳೆಯಲಿದೆ. ಜಿಲ್ಲೆಯ ಜನತೆಯು ಸಹ ಈ ನಡೆಯನ್ನು ಸಾಮೂಹಿಕವಾಗಿ ವಿರೋದಿಸಬೇಕಿದ್ದು ಅಹಿಂದ ವೇದಿಕೆ ಜಿಲ್ಲೆಯ ಪರವಾದ ಹೋರಾಟದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.

















Prathidvani Yellapura