
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಸ್ಥಾನದ ಆವಾರದಲ್ಲಿ ಆಗಸ್ಟ್,13 ರ ಗುರುವಾರದಂದು “ಆರ್ಟ್ ಆಫ್ ಲಿವಿಂಗ್” ಯಲ್ಲಾಪುರ
“ಗೋಸೇವಾ ಗತಿ ವಿಧಿ, ದಾಂಡೇಲಿ ಜಿಲ್ಲಾ, ಶಿರಸಿ ವಿಭಾಗ“
ಶ್ರೀ ಗೋವರ್ಧನ (ರಿ) ಗೋಶಾಲೆ ಕರಡೊಳ್ಳಿ, ಯಲ್ಲಾಪುರ (ಉ.ಕ). ಇವರ ಸಂಯುಕ್ತ ಆಶ್ರಯದಲ್ಲಿ ನಾಡಿ ಪರೀಕ್ಷೆ – ಪಂಚಗವ್ಯ ಚಿಕಿತ್ಸಾ ಶಿಭಿರ ನಡೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕರಡೊಳ್ಳಿ ಗೋವರ್ಧನ ಗೋ ಶಾಲೆ ಪ್ರಮುಖ ಗಣಪತಿ ಕೋಲಿಬೇಣ ಮಾದ್ಯಮದ ಮೂಲಕ ಮನವಿ ಮಾಡಿದ್ದಾರೆ.
ದಿನಾಂಕ 13 ರ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಭಿರ ಶ್ರೀ ಶಕ್ತಿ ಗಣಪತಿ ದೇವಸ್ಥಾನ ಆವರಣದಲ್ಲಿ ನಡೆಯಲಿದೆ. ಖ್ಯಾತ ವೈದ್ಯರಾದ ಡಾ|| ಪದ್ಮಾವತಿ ಕುಲಕರ್ಣಿ ಅವರು ಉಪಸ್ಥಿತರಿದ್ದು ಪರೀಕ್ಷಿಸಲಿದ್ದಾರೆ, ಆಲಸ್ಯ, ಅಧಿಕ ರಕ್ತದೊತ್ತಡ BP, ಮಧುಮೇಹ (ಶುಗರ್), ಅರ್ಧ ಮತ್ತು ಪೂರ್ತಿ ತಲೆ ನೋವು, ಜ್ವರ,ಕಫ, ಶೀತ, ಅಸ್ತಮಾ, ಕೆಮ್ಮು, ಮೂಲವ್ಯಾಧಿ, ಬೇಧಿ, ಸಂಧಿವಾತ, ಅಲ್ಸರ್, ಪಿತ್ತ, ಕ್ಯಾನ್ಸರ್, ಸೋರಿಯಾಸಿಸ್, ನರಗಳ ಸಮಸ್ಯೆ, ಸ್ತ್ರೀ ಸಂಬಂಧಿ ರೋಗಗಳು, ಮಾನಸಿಕ ಖಿನ್ನತೆ, ನೆನಪಿನ ಶಕ್ತಿ ಕಡಿಮೆ ಆಗುವುದು, ಬಂಜೆತನ, ತೂಕ ಹೆಚ್ಚಾಗುವುದು, ಥೈರಾಯ್ಡ್, ಮುಟ್ಟು ನಿಲ್ಲುವ ಸಮಸ್ಯೆ ಇನ್ನೂ ಅನೇಕ ರೋಗಗಳನ್ನು “ಪಂಚಗವ್ಯ ಔಷಧಿ”ಗಳಲ್ಲಿ ಪರಿಹರಿಸಿಕೊಳ್ಳಬಹುದಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ವಿಶೇಷ ಮಾಹಿತಿ : ▶ ತಪಾಸಣೆ ಉಚಿತವಾಗಿದ್ದು, ಔಷಧಿಗಾಗಿ ಗೋಸೇವಾ ನಿಧಿ ಸಂಗ್ರಹಿಸಲಾಗುತ್ತದೆ. ▶ತಪಾಸಣೆಗಾಗಿ ಹಸಿದ ಹೊಟ್ಟೆಯಲ್ಲಿ ಅಥವಾ ತಿಂಡಿ ತಿಂದು 2 ಘಂಟೆ ಕಳೆದಿರಬೇಕು. ▶ ತಪಾಸಣೆಗಾಗಿ ತಮ್ಮ ಹೆಸರನ್ನು 12 – 08 – 26 ರ ಒಳಗೆ ನೋಂದಾಯಿಸಬೇಕು. ನೋಂದಣಿಗಾಗಿ ಸಂಪರ್ಕಿಸಿ :- 8762520989, 7022889743. “ಪಂಚಗವ್ಯ ಆಧಾರಿತ – ರೋಗ ಮುಕ್ತ ಭಾರತ”
ಸಹಾಯ – ಸಹಕಾರ
“ಅಖಿಲ ಕರ್ನಾಟಕ ಗವ್ಯೋತ್ಪನ್ನ & ಮಾರಾಟ ಸಂಘ”
“ಓಂಕಾರ ಯೋಗ ಕೇಂದ್ರ”
















Prathidvani Yellapura