Breaking News

ವೈಪಿಎಲ್ ಸೀಸನ್ 4 ಗೆ ಲಗ್ಗೆ ಇಡಲು ಸಜ್ಜಾದ “ರಾಯಲ್ ಸ್ಟ್ರೈಕರ್ಸ್” ನ್ಯೂ ಜೆರ್ಸಿ ಅನಾವರಣ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಪ್ರಾರಂಭವಾಗಿರುವ “ವೈ.ಪಿ.ಎಲ್” ಚುಟುಕು ಕ್ರಿಕೆಟ್ ಪಂದ್ಯಾವಳಿ ಸೀಸನ್ 4 ವಿದ್ಯುಕ್ತವಾಗಿ ಚಾಲನೆಯಾಗಿದ್ದು ಈ ಬಾರಿ ಒಂಬತ್ತು ತಂಡಗಳು ಕಪ್ ಈ ಬಾರಿ ನಮ್ಮದೇ ಎನ್ನುತ್ತಿವೆ.


ರವಿವಾರ ಪಟ್ಟಣದ ಪ್ರತಿಷ್ಠಿತ ಶ್ರೀರಾಮ ರೆಸಿಡೆನ್ಸಿ ಯಲ್ಲಿ “ರಾಯಲ್ ಸ್ಟ್ರೈಕಸ್೯” ತಂಡದ ನ್ಯೂ ಜೆರ್ಸಿ ಅನಾವರಣಗೊಳಿಸಲಾಯಿತು. ಯುವ ಉದ್ಯಮಿ ರಾಮನಾಥ ಡೆವಲಪಸ್೯ ಮಾಲಿಕ ಬಾಲಕೃಷ್ಣ ನಾಯಕ್ ನ್ಯೂ ಜೆರ್ಸಿ ಅನಾವರಣ ಮಾಡಿ ಆಟಗಾರರಿಗೆ ವಿತರಿಸಿ ತಂಡದ ಗೆಲುವಿಗೆ ಹಾರೈಸಿದರು.


ತಂಡದ ಮಾಲಿಕರಾದ ಮುನಾವರ್ ಅಬ್ಬಿಗೆರೆ ಮತ್ತು ನಬಿಲ್ ಶೇಖ್ ತಂಡದ ಆಟಗಾರರಿಗೆ ಗೆಲುವಿನ ಹುರುಪು ತುಂಬಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್ ಕವಡಿಕೆರೆ, ಎಂ.ಎನ್ ಭಟ್, ಶೇಖ್ ಸಲೀಂ, ಶಬ್ಬೀರ್ ಆಜಾದ, ಇಮ್ರಾನ್ ಬಾಯ್, ಇರ್ಷಾದ್ ಬಾಯ್, ಅಸ್ಗರ್ ಬಾಯ್ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕಿನ ನೂತನ ದಂಢಾಧಿಕಾರಿಯಾಗಿ ಎಂ.ಆರ್.ಕುಲಕರ್ಣಿ ಅಧಿಕಾರ ಸ್ವೀಕಾರ.

ಪ್ರತಿಧ್ವನಿ ಯಲ್ಲಾಪುರ : ತಾಲೂಕು ದಂಢಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಹೊಸ್ಮನಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸರ್ಕಾರದ …

Leave a Reply

Your email address will not be published. Required fields are marked *