
ಪ್ರತಿಧ್ವನಿ ಯಲ್ಲಾಪುರ – ಕಳೆದೆರಡು ದಿನಗಳ ಹಿಂದೆ ಮೂಲಭೂತ ಸೌಕರ್ಯ ವಂಚಿತ ಸಣ್ಣ ಪಾನಿಗುಂಡಿ ಗ್ರಾಮದ ಕುರಿತು ” ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ” ವಿಸ್ತೃತ ವರದಿ ಪ್ರಕಟಿಸಿತ್ತು. ಅಧಿಕಾರಿಗಳು ಗಮನಿಸಿದ್ದಾರೊ ಇಲ್ಲವೊ ಆದರೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಯುವ ಕರ್ನಾಟಕ ರಕ್ಷಣಾ ವೇದಿಕೆ ಹಾಗು ಜಯಕರ್ನಾಟಕ ಸಂಘಟನೆಗಳು ರವಿವಾರ ಸಣ್ಣ ಪಾನಿಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಅರಿತು ಗ್ರಾಮಸ್ಥರೊಂದಿಗೆ .


ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು ಉದಯಕಾಲ ರಾಜ್ಯ ಪತ್ರಿಕೆ ಸಣ್ಣ ಪಾನಿಗುಂಡಿ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ಭೇಟಿ ನೀಡಿರುವುದಾಗಿ ಸಂಘಟನೆಗಳ ಪ್ರಮುಖರು ಮಾಹಿತಿ ನೀಡಿದರು.

ಪ್ರಮುಖವಾಗಿ ಗ್ರಾಮದಲ್ಲಿನ ಸಮಸ್ಯೆಗಳನ್ನು ಅರಿತು ಗ್ರಾಮಸ್ಥರು ಇಟ್ಟಿರುವ ಮೂಲಭೂತ ಸೌಕರ್ಯಗಳ ಬೇಡಿಕೆಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಬೇಡಿಕೆ ಹೀಡೇರಿಕೆಗಾಗಿ ಶಾಸಕರಿಗೆ,ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನಮ್ಮ ಸಂಘಟನೆಗಳು ಜೊತೆಗಿರಲಿವೆ ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾಗಿ ಮಾದ್ಯಮಕ್ಕೆ ಸಂಘಟನೆಗಳು ಮಾಹಿತಿ ನೀಡಿದವು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಪಾನಿಗುಂಡಿ ಘಟಕದ ಅಧ್ಯಕ್ಷ ಜೀವ ಕೈಟ್ಕರ್, ಜಯಕರ್ನಾಟಕ ಸಂಘಟನೆ ಸಣ್ಣ ಪಾನಿಗುಂಡಿ ಘಟಕದ ಅಧ್ಯಕ್ಷ ಗಂಗಾರಾಮ್,ಮಂಗ್ಯಾನತಾವರೆಗೆರೆ ಘಟಕಾಧ್ಯಕ್ಷ ಇಮಾಮ್ ಕಣವಿ ಸಾಮಾಜಿಕ ಹೋರಾಟಗಾರ ವಿಟ್ಟು ದೊಂಡು ಪಟಕಾರೆ ಸ್ಥಳೀಯ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು ಉದಯಕಾಲ ರಾಜ್ಯ ಪತ್ರೆಕೆಯ ಸುದ್ದಿ ಆಧರಿಸಿ ಸಣ್ಣ ಪಾನಿಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದು ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಪ್ರಮುಖವಾಗಿ ಅತ್ಯಂತ ಕಡಿದಾದ ಅರಣ್ಯ ಪ್ರದೇಶದ ಸಮರ್ಪಕವಾಗಿರದ ರಸ್ತೆಯಲ್ಲಿ 19 ಅಂಗನವಾಡಿ ಮಕ್ಕಳು ನಡೆದು ಸಾಗುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕುಡಿಯುವ ನೀರು,ಸರಿಯಾದ ರಸ್ತೆ ಅತ್ಯಂತ ಪ್ರಮುಖ ಬೇಡಿಕೆಗಳಾಗಿದ್ದು ತೆರಿಗೆ ಭರಿಸುವ ಪ್ರಜೆಗಳು ಬೇಡುವುದರಲ್ಲಿ ಅರ್ಥವಿಲ್ಲ, ಸರ್ಕಾರವೆ ಸಮಸ್ಯೆ ಬಗೆಹರಿಸಬೇಕಿದೆ ಈ ಪ್ರಕ್ರಿಯೆಯಲ್ಲಿ ಜಯಕರ್ನಾಟಕ ಸಂಘಟನೆ ಪಕ್ಷಾತೀತವಾದ ಹೋರಾಟಕ್ಕೆ ಗ್ರಾಮದ ಪರವಾಗಿರಲಿದೆ.
ವಿಲ್ಸನ್ ಫರ್ನಾಂಡೀಸ್, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ.

ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಣ್ಣ ಪಾನಿಗುಂಡಿ ಗ್ರಾಮದ ಜನರ ಮೂಲಭೂತ ಸೌಕರ್ಯಗಳ ಬೇಡಿಕೆ ನ್ಯಾಯ ಸಮ್ಮತವಾಗಿದ್ದು ಗ್ರಾಮಸ್ಥರ ಧ್ವನಿಗೆ ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆ ಬೆಂಬಲಕ್ಕಿದೆ.
ಅರ್ಜುನ ಬೆಂಗೇರಿ, ಜಿಲ್ಲಾಧ್ಯಕ್ಷ ಕರ್ನಾಟಕ ದಲಿತ ರಕ್ಷಣಾ ವೇದಿಕೆ.
ಯುವ ಕರ್ನಾಟಕ ರಕ್ಷಣಾ ವೇದಿಕೆ











Prathidvani Yellapura