Breaking News

ತೋಟಗಾರಿಕ ಇಲಾಖೆ ಪರಿಸರದಲ್ಲಿ ಮಕರಂದ ಕ್ರೂಡಿಕರಣ – ನೂರಾರು ಜೇನಿನ ಪೆಟ್ಟಿಗೆಗಳ ಅನಾವರಣ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನಾಯ್ಕನ ಕೆರೆ ಬಳಿ ಇರುವ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ,ಮಾವಿನ ತೋಟದ ನಡುವೆ ನೂರಾರು ಸಂಖ್ಯೆಯಲ್ಲಿ ಜೇನಿನ ಪೆಟ್ಟಿಗೆ ಇಟ್ಟಿದ್ದು ಮಕರಂದ ಕ್ರೂಡಿಕರಣದ ಜೇನಿನ ಕೃಷಿ ಸಾಗಿದೆ.


ತಾಲೂಕಿನ ದೋಣಗಾರದ ನಿವಾಸಿ ತಿಮ್ಮಣ್ಣ ಭಟ್ ಈ ಜೇನಿನ ಕೃಷಿಯಲ್ಲಿ ತೊಡಗಿದವರಾಗಿದ್ದು ತೋಟಗಾರಿಕ ಇಲಾಖೆಗೆ ಜೇನಿನ ಗೂಡುಗಳನ್ನು ಒದಗಿಸುವ ಅಧಿಕೃತ ಸರಬರಾಜುದಾರರಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ.


ಸದ್ಯ ಯಲ್ಲಾಪುರದ ತೋಟಗಾರಿಕಾ ಕ್ಷೇತ್ರದಲ್ಲಿ200 ಕ್ಕು ಅಧಿಕ ಜೇನಿನ ಪೆಟ್ಟಿಗೆ ಅನುಷ್ಟಾನ ಮಾಡಿದ್ದಾರೆ.
ಸದ್ಯ ತೋಟಗಾರಿಕ ಕ್ಷೇತ್ರದಲ್ಲಿ ಸಮೃದ್ಧವಾಗಿ ಬೆಳೆದ ಅಡಿಕೆ ತೋಟ, ಗೇರು‌ತೊಟ,ಮಾವು ಮತ್ತು ಸಪೋಟ ಸುಭೀಕ್ಷವಾಗಿ ಬೆಳೆದಿದ್ದು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿನ ಕಾಡು ಹೂಗಳಿಂದ ಸಂಗ್ರಹಿಸಿದ ಜೇನು ಪೆಟ್ಟಿಗೆ ಸೇರಲಿದೆ.

ತೋಟಗಾರಿಕೆ ಇಲಾಖೆ ಯಿಂದ ಜೇನು ಕೃಷಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ರೈತರಿಗೆ ಗೂಡುಗಳನ್ನು ವಿತರಿಸುವ ಸಂದರ್ಭದಲ್ಲಿ ಇಲ್ಲಿಂದಲೆ ನೀಡಬಹುದಾಗಿದೆ ಮತ್ತು ಜೇನು ಕೃಷಿಯ ಆಸಕ್ತಿ ಇರುವವರಿಗೆ ಬೃಹತ್ ಪ್ರಮಾಣದ ಪ್ರಾತ್ಯಕ್ಷಿಗೆ ಅನುಕೂಲ ಆಗಲಿದೆ, ಮಕರಂದ ಸಂಗ್ರಹಕ್ಕೆ ಪ್ರಶಸ್ತವಾದ ಸ್ಥಳವಾಗಿದ್ದು ಇದರಿಂದ ಪರಾಗಸ್ಪರ್ಷಕ್ಕು ಅನುಕೂಲವಾಗಲಿದೆ. ತೋಟಗಾರಿಕೆ ಇಲಾಖೆಯ ಜೇನು ಪೆಟ್ಟಿಗೆಯ ವ್ಯವಸ್ಥೆಯನ್ನು ನಾವೆ ನೋಡಿಕೊಳ್ಳುವುದರಿಂದ ಎಲ್ಲ ಕಸರ್ಯಕ್ಕು ಇದು ಅನುಕೂಲಕರವಾಗಿದೆ. ಜೇನು ಪೆಟ್ಟಿಗೆ ರೈತರಿಗೆ ನೀಡುವ ಸಂದರ್ಭದಲ್ಲಿ ಇಲ್ಲಿಂದಲೆ ನೀಡಲು ಅನುಕೂಲವಾಗಲಿದೆ.
ತಿಮ್ಮಣ್ಣ ಭಟ್ಟ , ದೋಣಗಾರ, ಜೇನು ಕೃಷಿಕ

ಇಲಾಖೆಯ ಕ್ಷೇತ್ರ ಪರಿಸರದಲ್ಲಿ ಜೇನಿನ ಪೆಟ್ಟಿಗೆ ಇರಿಸಿದ್ದು ಅಡಿಕೆ ಹೂವಿನ ಪರಾಗಸ್ಪರ್ಶ ಕಾರ್ಯಕ್ಕು ಇದು ಅನುಕೂಲ ಆಗಲಿದೆ. ವಿಶೇಷವಾಗಿ ಜೇನಿನ ಕೃಷಿ ಬಗ್ಗೆ ಆಸಕ್ತಿ ಹೊಂದಿದವರು ಇಲ್ಲಿ ಬಂದು ಪ್ರಾತ್ಯಕ್ಷಿಕೆ ಪಡೆಯಬಹುದಾಗಿದೆ.
ಅರುಣ್
ತೋಟಗಾರಿಕೆ ಇಲಾಖೆ ಸ್ಥಳೀಯ ಅಧಿಕಾರಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಮಪೂಜ್ಯ “ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ದತ್ತ ಮಂದಿರದಲ್ಲಿ ಆಶಿರ್ವಚನ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ದತ್ತ ಮಂದಿರ ಪರಿಸರದಲ್ಲಿ ನೂರಾರು ದೇವತೆಗಳು ಆವಾಸರಾಗಿರುತ್ತಾರೆ. ದತ್ತಗುರುವಿನ ಸೇವೆ ಜನ್ಮ ಪಾವನ ಮತ್ತು …

Leave a Reply

Your email address will not be published. Required fields are marked *