
ಪ್ರತಿಧ್ವನಿ ಯಲಾಪುರ :ಇಂದಿನ ಕಾಲಮಾನದಲ್ಲಿ ದುಡಿದ ಹಣ ದುಂದು ಮಾಡಿ ಅರ್ಥಹೀನ ಕೆಲಸಗಳಲ್ಲಿ ಪೋಲು ಮಾಡುವವರ ಮದ್ಯೆ ಸಣ್ಣ ಯಲವಳ್ಳಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕ್ರಿಯಾಶೀಲ ಯುವಕ ವಿಟ್ಟು ದೋಂಡು ಪಟಕಾರೆ ವಿಬಿನ್ನತೆ ತೋರಿದ್ದು ಕಿರವತ್ತಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಲೆಗಳ 410 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ತನ್ನ ಸ್ವಂತ ದುಡಿದ ಹಣದಿಂದ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಸಾರ್ಥಕತೆ ಮೆರೆದಿದ್ದಾರೆ.

ತಾಲೂಕು ಕಿರವತ್ತಿ ಪಂಚಾಯತಿ ವ್ಯಾಪ್ತಿಯ ತೆಂಗಿನಗಿರಿ, ಬೊಂಬಡಿಕೊಪ್ಪ , ಕಂಚನಹಳ್ಳಿ , ಕೋನಮಡ್ಡಿ, ಕಾರಕುಂಡಿ, ಹುಣಸಗಿರಿ , ಮುಂದವಾಡ , ದೊಡ್ಡಯಲ್ಲವಳಿ , ಸಣ್ಣ ಯಳವಳ್ಳಿ , ಹುಣಸಗಿರಿ ಗೌಳಿವಾಡ, ಪಾನಿಗುಂಡಿ , ಸಣ್ಣ ಪಾನಿಗುಂಡಿ, ಕಂಚನಹಳ್ಳಿ ಗ್ರಾಮದ ಎಲ್ಲಾ ಶಾಲೆ ಮುದ್ದು ಮಕ್ಕಳಿಗೆ ನೋಟ್ ಬುಕ್ ಪೆನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭ ಯಲವಳ್ಳಿ ಗ್ರಾಮದ ಹಿರಿಯರು ಹಾಗೂ ಸುರೇಶ್ ರಾಮಾ ಮಿರಾಶಿ, ಪ್ರಕಾಶ್ ಮಿರಾಶಿ, ಬಾಬು ಪಟಕಾರೆ, ಹಾಗೂ ಯಳವಳ್ಳಿ ಶಾಲೆಯ ಶಿಕ್ಷಕರಾದ ಅಶೋಕ್ ಹಾಗೂ ಸಣ್ಣ ಯಳವಳ್ಳಿ ಶಿಕ್ಷಕಿ ಭಾಗ್ಯ ಶಿಕ್ಷಕರಾದ ಸಂತೋಷ್ ಸಹಕರಿಸಿ ಪ್ರೋತ್ಸಹಿಸಿದರು.








Prathidvani Yellapura