
ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಯುಗಾದಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಉತ್ಸವದ ಜಾಗೃತಿಗಾಗಿ ಮಂಗಳವಾರ ಬೃಹತ್ ಬೈಕ್ ರ್ಯಾಲಿ ಜರುಗಿತು.

ಪಟ್ಟಣ ಕಾಳಮ್ಮನಗರ ಕಾಳಮ್ಮದೇವಾಲಯದಲ್ಲಿ ಪೂಜೆ ನೆರವೇರಿಸಿ ಪ್ರಾರಂಭಗೊಂಡ ಬೈಕ್ ರ್ಯಾಲಿಗೆ ಉತ್ಸವ ಸಮಿತಿ ಪ್ರಮುಖರು ಹಿರಿಯರು ಚಾಲನೆ ನೀಡಿದರು.

ಪಟ್ಟಣಾಧ್ಯಂತ ಸಂಚರಿಸಿದ ಬೈಕ್ ರ್ಯಾಲಿ ಗ್ರಾಮದೇವಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ರ್ಯಾಲಿ ಯಲ್ಲಿ ನೂರಾರು ಬೈಕ್ ಗಳು ಭಾಗವಹಿಸಿದ್ದು ಕೇಸರಿ ಪತಾಕೆ ಕಟ್ಟಿಕೊಂಡು ಸಂಭ್ರಮದಲ್ಲಿ ತೊಡಗಿಕೊಂಡಿದ್ದರು.

ಮಕ್ಕಳ ಸೈಕಲ್ ಜಾಥಾ ಕೂಡ ರ್ಯಾಲಿ ಆಕರ್ಷಣೆ ಹೆಚ್ಚಿಸಿತ್ತು. ಮಹಿಳೆಯರು ಸಹ ರ್ಯಾಲಿ ಯಲ್ಲಿ ಪಾಲ್ಗೊಂಡರು.

ವಿಶೇಷವಾಗಿ ಯುಗಾದಿ ಉತ್ಸವದ ಬೈಕ್ ರ್ಯಾಲಿ ಯಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಭಾವಚಿತ್ರ ಹಿಡಿದು ಪ್ರದರ್ಶನ ಮಾಡುತ್ತಾ ಜೈಕಾರ ಕೂಗುತ್ತ ಅಪ್ಪು ಮೇಲಿನ ಅಭಿಮಾನವನ್ನು ತೋರಿಸಿದರು ಇದು ಮೆರವಣಿಗೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಬೈಕ್ ರ್ಯಾಲಿ ಆಗಿದ್ದರು ಮೆರವಣಿಗೆಯಲ್ಲಿ ಸಾಕಷ್ಟು ತೆರೆದ ಜೀಪ್ ಗಳು ಕೆಸರಿ ಅಲಂಕಾರದೊಂದಿಗೆ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು.










Prathidvani Yellapura