
ಯಲ್ಲಾಪುರ : ‘ಪುನೀತ್ ರಾಜಕುಮಾರ್ ಸಾವಿನ ನಂತರವು ಬದುಕಿರುವ ಮಹಾನ್ ಚೇತನರಾಗಿದ್ದಾರೆ. ಕಾರಣ ಅವರು ಸಮಾಜಕ್ಕೆ ನೀಡಿದ ಸೇವೆ ಅವರ ಮರಣದ ನಂತರವು ಇಂದಿಗು ಬದುಕಿಸಿದೆ. ನನಗೆ ಅವರೇ ಸ್ಪೂರ್ತಿ ಯಾಗಿದ್ದಾರೆ. ಅವರು ಸಮಾಜಕ್ಕೆ ನೀಡಿದ ಸೇವೆ ನೋಡಿ ಸಮಾಜ ಸೇವೆಯ ಮೂಲಕ ಉಸಿರುನಿಂತ ಮೇಲೂ ಹೆಸರು ಉಳಿಯಲು ಕಾರಣವಾಗುತ್ತದೆ ಎಂಬುದನ್ನು ಮನಗಂಡು ಸಮಾಜ ಸೇವೆಗೆ ಮುಂದಾಗಿದ್ದೇನೆ
ಎಂದು ಶಿರಸಿಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ತಮ್ಮ ಟ್ರಸ್ಟ ವತಿಯಿಂದ ತಾಲೂಕಿನ ಕಿರವತ್ತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು,

‘ನಾನು ಮಾಡಿದ ಸೇವೆ ಸಮಾಜಕ್ಕೆ ಉಪಯೋಗವಾದರೆ ಮಾಡಿದ ಸೇವೆ ಸಾರ್ಥಕವಾಗುತ್ತದೆ. ಕುಡಿಯುವ ನೀರು ಆರೋಗ್ಯಕ್ಕೆ ಕಾರಣವಾಗುತ್ತದೆ ಎಂಬ ಕಾರಣದಿಂದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನೀಡುತ್ತಿದ್ದೇನೆ’ ಎಂದರು

ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನದಲ್ಲಿ ಸಾಧನೆ ಸಾಧ್ಯ. ಇಲ್ಲಿ ಉತ್ತಮ ಗುರುಗಳಿದ್ದಾರೆ. ಜೀವನದ ಗುರಿ ನೀವು ವಿದ್ಯಾರ್ಥಿಗಳು ಇಟ್ಟುಕೊಂಡು ಸಾಧನೆ ಮಾಡಿ. ಸಮಾಜದಲ್ಲಿ ದಾನಿಗಳು ಸಾಕಷ್ಟು ಇರಬಹುದು. ಆದರೆ ನೀಡಿದ ದಾನದ ಸದುಪಯೋಗವಾಗಬೇಕು. ಅಂದಾಗ ಮಾತ್ರ ಮಾಡಿದ ದಾನ ಶ್ರೇಷ್ಠತೆ ಪಡೆಯುತ್ತದೆ. ಅನಂತಮೂರ್ತಿ ಹೆಗಡೆ ಯಾವುದೇ ಪ್ರಚಾರದ ಬಯಕೆ ಇಲ್ಲದೇ ಸಮಾಜಮುಖಿ ಕಾರ್ಯಗಳಿಂದ ಜಿಲ್ಲೆಯ ಆಸ್ತಿಯಾಗಿದ್ದಾರೆ’ ಎಂದು ಬಿಜೆಪಿ ಮಂಡಲಾಧ್ಯಕ್ಷ ‘ಪ್ರಸಾದ ಹೆಗಡೆ ಹೇಳಿದರು.

ಪ್ರಮುಖರಾದ ಸೊಮೇಶ್ವರ ನಾಯ್ಕ, ಗಣೇಶ ಹೆಗಡೆ, ಅನಂತ ಮೂರ್ತಿಹೆಗಡೆ, ಪ್ರಸಾದ ಹೆಗಡೆ, ಗಣಪತಿ ಬೋಳಗುಡ್ಡೆ ವೇದಿಕೆಯಲ್ಲಿದ್ದರು. ಸಾಮಾಜಿಕ ಕಾರ್ಯಕರ್ತ ಸುಭಾಷ ಶೇಷಗಿರಿ ಮಾತನಾಡಿದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಉಪ ಪ್ರಾಂಶುಪಾಲ ಜನಾರ್ಧನ ಗಾಂವ್ಕರ್ ಸ್ವಾಗತಿಸಿದರು,ಶಿಕ್ಷಕ ಸತೀಶ ಯಲ್ಲಾಪುರ ನಿರೂಪಿಸಿದರು, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ ವಂದಿಸಿದರು.
Prathidvani Yellapura