Breaking News

ನಾಟಕದ ಯಶಸ್ಸಿಗೆ ಕಾರಣೀಕರ್ತರಾದ ಕಲಾವಿಧರಿಗೆ ಗೌರವ ಸನ್ಮಾನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ತೆರೆಯ ಮೇಲಿನ ಬಣ್ಣದ ಬದುಕಿಗೆ ಜೀವ ತುಂಬಿ ನಿರ್ವಹಿಸುವ ಪಾತ್ರಕ್ಕೂ ಮೆರುಗು ಬರಬೇಕೆಂದರೆ ಕಥೆಯನ್ನು ಬರೆದ ಲೇಖಕ ಅದಕ್ಕೆ ಜೀವ ತುಂಬಿರಬೇಕು. ಅಂತಹ ಉತ್ತಮ ನಾಟಕ ಕಥೆ ಬರೆದ ಶಿಕ್ಷಕ ವಿಜಯ್ ನಾಯಕರವರ ಬರವಣಿಗೆ ಶ್ಲಾಘನೀಯ ಮತ್ತು ಪರ ಊರಿನ ಕಲಾವಿದರೆನ್ನುವ ಬೇಧ ಭಾವವಿಲ್ಲದೇ ಗೌರವಿಸಿ ಸತ್ಕರಿಸಿ ನಾಟಕದ ಯಶಸ್ಸನ್ನು ಸನ್ಮಾನದ ಮೂಲಕ ಗೌರವಿಸಿದ ಸಂಘಟಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆಂದು ನಾಟಕದ ಪಾತ್ರಧಾರಿ ಸುರೇಶ ಆರ್ ನಾಯಕ ಹೇಳಿದರು.

ಅವರು ಪಟ್ಟಣದ ನಿಸರ್ಗ ಮನೆಯಲ್ಲಿ ಪಟ್ಟಣದ ಮನರಂಜನಾ ಹವ್ಯಾಸಿ ಕಲಾಬಳಗದ ಅಡಿಯಲ್ಲಿ ನಡೆದ ‘ದುಷ್ಟಕೂಟದ ಸುಳಿಯಲ್ಲಿ’ ಎಂಬ ನಾಟಕದ ಯಶಸ್ಸನ್ನು ಸಂಭ್ರಮಿಸುವ ಸಭೆಯಲ್ಲಿ ಮಾತನಾಡಿದರು.


ಫೆ.14 ರಂದು ಪಟ್ಟಣದ ಕಾಳಮ್ಮನಗರದಲ್ಲಿ ದಿ.ನಾರಾಯಣ ಎಚ್ ನಾಯಕ ವೇದಿಕೆಯಲ್ಲಿ ಮನರಂಜನಾ ಹವ್ಯಾಸಿ ಕಲಾಬಳಗದಿಂದ ನಿವೃತ್ತ ಶಿಕ್ಷಕ ವಿಜಯ್ ಎಸ್ ನಾಯಕ ಬರೆದ ‘ದುಷ್ಟಕೂಟದ ಸುಳಿಯಲ್ಲಿ’ ಅರ್ಥಾತ್ ‘ಚಿಗುರಿದ ಕನಸು’ ಎಂಬ ಸಾಮಾಜಿಕ ಹಾಸ್ಯ ಬರಿತ ನಾಟಕ ಪ್ರದರ್ಶಿಸಿ ಯಶಸ್ಸು ಕಂಡ ಹಿನ್ನಲೆಯಲ್ಲಿ ಪಾತ್ರಧಾರಿಗಳಿಗೂ, ತೆರೆಮರೆಯಲ್ಲಿ ಕೆಲಸ ಮಾಡಿದ ಕಲಾವಿದರಿಗೂ ಸಹಕರಿಸಿದ ಪ್ರೋತ್ಸಾಹಕರಿಗೂ ಸಂಘಟಕರು ಗೌರವ ಸಲ್ಲಿಸಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್ ಭಟ್ಟ, ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸಂಜೀವ ಹೊಸ್ಕೇರಿ, ನಾಟಕದ ನಿರ್ದೇಶಕ ಗೌರೀಶ್ ನಾಯಕ ಅಲಗೇರಿ, ಪ್ರವೀಣ್ ನಸಯಕ ಹಿಲ್ಲೂರು, ತಿಲೇಶ್ ನಾಯಕ ಹಿಲ್ಲೂರು, ನಿವೃತ್ತ ಶಿಕ್ಷಕರಾದ ರಮೇಶ್ ನಾಯಕ, ಸುಬ್ರಾಯ ನಾಯಕ, ಸಂತೋಷ ಕೊಳಗೇರಿ, ರಮಾನಂದ ನಾಯಕ, ಮಂಜುನಾಥ ಹೆಚ್ ನಾಯಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕ ಹರೀಶ್ ನಾಯಕ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ವಿಜಯ್ ನಾಯಕ ಪ್ರಾಸ್ತಾವಿಕ ನುಡಿದರು, ಶಿಕ್ಷಕ ರಾಘವೇಂದ್ರ ವಂದಿಸಿದರು ಕೇಬಲ್‌ ನಾಗೇಶ್ ನಿರೂಪಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *