

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ: ಪಟ್ಟಣದ ತಟಗಾರ ಕ್ರಾಸ್ ಬಳಿ ರವಿವಾರ ಸಂಜೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತೊಬ್ಬ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ.

ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಕೊಪ್ಪ ನಿವಾಸಿ , ಹಳಿಯಾಳದಲ್ಲಿ ಐಟಿಐ ಓದುತ್ತಿರುವ ದರ್ಶನ ಶ್ರೀಕಾಂತ ಭಂಡಾರಿ (18) ಹಾಗೂ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಶೆಟ್ಟಿಕೊಪ್ಪದ ನಿವಾಸಿ ಟೈಲ್ಸ ಕಾರ್ಮಿಕ ರಾಜು ಸುರೇಶ ಆಚಾರಿ (18) ಮೃತಪಟ್ಟ ಯುವಕರಾಗಿದ್ದಾರೆ.
ಯಲ್ಲಾಪುರ ಪಟ್ಟಣ ನಿವಾಸಿ ಬಾರ್ ಬೆಂಡರ್ ಜಾಬೀರ್ ಮಹಮ್ಮದ್ ಗೌಸ್ ಬಾಳಸೊಂಗಿ ( 18) ಗಾಯಾಳು ಯುವಕನಾಗಿದ್ದಾನೆ.

ಘಟನೆ ವಿವರ : ಕಾರು ಹಾಗೂ ಬೈಕ್ ಎರಡೂ ಕಾರವಾರದಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಾರನ್ನು ಒಮ್ಮೆಲೆ ತಿರುಗುಸಿದಾಗ ಬೈಕ್ ಡಿಕ್ಕಿಯಾಗಿದ್ದು ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರು. ಒಬ್ಬಾತನಿಗೆ ಗಂಭೀರ ಗಾಯಗಳಾಗಿವೆ.
ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Prathidvani Yellapura