

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ – ಆಂಗ್ಲರ ದಾಸ್ಯದಿಂದ ಸ್ವಾತಂತ್ರ್ಯ ಪಡೆದ ಭಾರತಕ್ಕೆ 76 ರ ಸಂಭ್ರಮ ಅದನ್ನು ಸ್ಮರಣೀಯವಾಗಿಸಲು ಪ್ರತಿವರ್ಷ ವಿಬಿನ್ನ ಕಾರ್ಯಕ್ರಮಗಳೊಂದಿಗೆ ” ರಾಷ್ಟ್ರ ಭಕ್ತ ಸಂಘಟನೆ ” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದೆ ಅದರಂತೆ ಈ ಬರಿಯು ಆಗಸ್ಟ್ 15 ರ ಸಂಜೆ ಯಲ್ಲಾಪುರ ತಾಲೂಕ ಪಂಚಾಯತ ಆವಾರದ ಗಾಂಧಿ ಕುಟಿರದಲ್ಲಿ ಸಾಂಸ್ಕೃತಿಕ, ಯೋದರಿಗೆ ಸನ್ಮಾನ ಮತ್ತು ತಾಲೂಕಿನ ಪ್ರತಿಬಾನ್ವಿತ ಆಯ್ದ ಗಾನಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ರಾಷ್ಟ್ರ ಭಕ್ತ ಬಂದು ಭಗಿನಿಯರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ರಾಷ್ಟ್ರ ಭಕ್ತ ಸಂಘಟನೆಯ ಪ್ರಮುಖ ಶಫಿ ಎಮ್ ಶೇಖ್ ಹೇಳಿದರು.
ಅವರು ಪಟ್ಟದ ಖಾಸಗಿ ಹೊಟೆಲ್ ನಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಆಹ್ನಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಬಾರಿ ವಿಶೇಷವಾಗಿ ನಾಲ್ಕನೆ ಬಾರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ. ಮತ್ತು ಉತ್ತಮ ಅರಣ್ಯ ಅಧಿಕಾರಿಯಾಗಿ ಸೇವೆ ನೀಡುತ್ತಿರುವ ಯಲ್ಲಾಪುರ ಡಿ.ಎಫ್.ಓ ಎಸ್.ಜಿ.ಹೆಗಡೆ ಹಾಗು ಸಾಮಾಜಿಕ ಕ್ಷೇತ್ರದಲ್ಲಿ ಸೇವೆನೀಡುತ್ತಿರುವ ಯುವ ಉದ್ಯಮಿ ಬಾಲಕೃಷ್ಣ ನಾಯಕ್ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಸಂಘಟನೆಯ ಮತ್ತೋರ್ವ ಪ್ರಮುಖ ಪ್ರೇಮಾನಂದ ನಾಯ್ಕ್ ಹೇಳಿದರು.
ಈ ಸಂದರ್ಭದಲ್ಲಿ ಮೀನು ಮಾರುಕಟ್ಟೆ ಕಾರ್ಯದರ್ಶಿ ಬಷೀರ್ ಸೈಯದ್, ಫೀರ್ ಸಾಬ್ ಐ ಶೇಖ್, ಅರವಿಂದ ಕೋಡ್ಕಣಿ ಉಪಸ್ಥಿತರಿದ್ದರು.






Prathidvani Yellapura