

ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಗ್ರಾಮದಲ್ಲಿ ಜೇನುಪೆಟ್ಟಿಗೆ ಕಳ್ಳತನವಾದ ಪ್ರಕರಣಕ್ಕೆ ಸಂಬAಧಿಸಿದಂತೆ ರವಿವಾರ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿತ್ಲಳ್ಳಿ ಗ್ರಾಮದ ನಿವಾಸಿ ಹರಿಹರ ವೆಂಕಟ್ರಮಣ ಹೆಗಡೆ ಎಂಬುವರ ತೋಟದಲ್ಲಿದ್ದ 13,,5೦೦ ಬೆಲೆಯುಳ್ಳ ಮೂರು ಜೇನುಗೂಡು ಪೆಟ್ಟಿಗೆಗಳ ಕಳ್ಳತನವಾಗಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುತ್ತಾರೆ.
ಹಿತ್ಲಳ್ಳಿ ಪುರ್ಲೆಮನೆ ನಇವಾಸಿ ಮಹೇಶ್ ರಾಮಾ ಸಿದ್ದಿ(20), ಶಿರನಾಲಾ ಬೈಚಗೋಡು ನಿವಾಸಿ ಗಣೇಶ ನಾಗೇಂಧ್ರ ಸಿದ್ದಿ ಎಂಬುವರೇ ಬಂಧಿತರಾಗಿರುತ್ತಾರೆ.
Prathidvani Yellapura