
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟದಲ್ಲಿ ಬೆಳ್ಳುಳ್ಳಿ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ರಸ್ತೆ ಪಕ್ಕ ಬಿದ್ದಿದ್ಷು ಲಾರಿಯಲಿದ್ದ ಬೆಳ್ಳುಳ್ಳಿ ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿದೆ.

ರಾಜಸ್ಥಾನದಿಂದ ಬೆಳ್ಳುಳ್ಳಿ ತುಂಬಿಕೊಂಡು ಕೆರಳ ಸಾಗುತ್ತಿದ್ದ ಲಾರಿ ಅರಬೈಲ್ ಘಟ್ಟದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದೆ.

ಸಂಚಾರಕ್ಕೆ ಯಾವುದೆ ತೊಡಕಾಗಿಲ್ಲ ಆದರೆ ಲಾರಿ ಡೀಸೆಲ್ ಟ್ಯಾಂಕ್ ನಿಂದ ಡಿಸೆಲ್ ಸೋರಿಕೆಯಾಗಿ ರಸ್ತೆ ತುಂಬಾ ಹರಿದು ಆತಂಕ ಸೃಷ್ಡಿಯಾಗಿತ್ತು ಹಾಗು ಈ ರೀತಿ ಇಂದನ ರಸ್ತೆಗೆ ಚೆಲ್ಲಿದರೆ ಟಾರ್ ಸಲೀಸಾಗಿ ಕಿತ್ತುಬಂದು ಹೆದ್ದಾರಿ ಹಾಳಾಗುತ್ತದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಹೆದ್ದಾರಿ ನಿರ್ವಹಣೆ ಮಾಡುವ ಸಿಬ್ಬಂದಿ.

ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆತ್ತಿ ಅದೇ ಲಾರಿಯಲ್ಲಿ ಮತ್ತೆ ಬೆಳ್ಳುಳ್ಳಿ ತುಂಬಲಾಗಿದೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿಯಬೇಕಿದೆ.
Prathidvani Yellapura