
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಸೊಸೈಟಿ ಚುನಾವಣೆಗಳಲ್ಲಿ ತೀವ್ರ ಆಸಕ್ತಿ ಕೆರಳಿಸಿದ ಮೂರನೇ ಹಾಗೂ ತಾಲೂಕಿನ ಕೊನೆಯ ಸೊಸೈಟಿಯಾದ ಇಡಗುಂದಿ ಸೊಸೈಟಿ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ನಾರಾಯಣ ಸೀತಾರಾಮ ಭಟ್ಟ ಕೊಡ್ಲಗದ್ದೆ ತಂಡ ಜಯಭೇರಿ ಬಾರಿಸಿದೆ.

ನ್ಯಾಯಾಲಯದ ನಿರ್ದೇಶನದಂತೆ ಮತ ಎಣಿಕೆ ಸೋಮವಾರ ನಡೆದಿದ್ದು ಸಾಮಾನ್ಯ ಕ್ಷೇತ್ರದಲ್ಲಿ ನಾರಾಯಣ ಸೀತಾರಾಮ ಭಟ್ಟ ಕೊಡ್ಲಗದ್ದೆ, ವಿಶ್ವನಾಥ ನಾರಾಯಣ ಭಟ್ಟ, ಶಿವರಾಮ ಮಹಾಬಲೇಶ್ವರ ಭಟ್ಟ, ಶಂಕರ ಕೃಷ್ಣ ಭಟ್ಟ ಕಣ್ಣಿ, ಶಂಕರ ಗೋಪಾಲಕೃಷ್ಣ ಭಟ್ಟ, ಅ-ವರ್ಗದಿಂದ ಮಹಾಬಲೇಶ್ವರ ತಮ್ಮಣ್ಣ ಗೌಡ, ಬ-ವರ್ಗದಿಂದ ಸತೀಶ ಶಶಿಕಾಂತ ನಾಯ್ಕ, ಪರಿಶಿಷ್ಟ ಜಾತಿ ವಿಭಾಗದಿಂದ ತಿಮ್ಮಣ್ಣ ಹನುಮಂತಪ್ಪ ಬೋವಿ, ಪರಿಶಿಷ್ಟ ಪಂಗಡದಿಂದ ಶಶಿಧರ ನಾರಾಯಣ ಸಿದ್ದಿ, ಸಾಲಗಾರರಲ್ಲದ ಕ್ಷೇತ್ರದಿಂದ ಗಣಪತಿ ಎನ್ ಭಟ್ಟ ಗೆಲುವು ಸಾಧಿಸಿದ್ದಾರೆ.

ಗೆದ್ದ ಎಲ್ಲ ಸದಸ್ಯರನ್ನು ಮತ್ತು ಗೆಲುವಿಗೆ ಶ್ರಮಿಸಿದ ಎಲ್ಲ ಮುಖಂqರು, ಕಾರ್ಯಕರ್ತರಿಗೆ ಶಾಸಕ ಶಿವರಾಮ ಹೆಬ್ಬಾರ್ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ.
Prathidvani Yellapura