Breaking News

ಆನಗೋಡು ಸೊಸೈಟಿ ಪಲಿತಾಂಶ ಪ್ರಕಟ-ಅಗ್ಗಾಶಿಕುಂಬ್ರಿ ತಂಡ ಗೆಲುವು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಸೊಸೈಟಿ ಚುನಾವಣೆಗಳಲ್ಲಿ ತೀವ್ರ ಆಸಕ್ತಿ ಕೆರಳಿಸಿದ ಆನಗೋಡು ಸೊಸೈಟಿ ಚುನಾವಣೆಯ ಫಲಿತಾಂಶ ರವಿವಾರ ಪ್ರಕಟವಾಗಿದ್ದು ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ತಂಡ ಜಯಭೇರಿ ಬಾರಿಸಿದೆ.
ಚುನಾವಣೆ ನಡೆದಾಗಿನಿಂದ ನ್ಯಾಯಾಲಯದ ನಿರ್ದೇಶನದಂತೆ ಮತ ಎಣಿಕೆ ರವಿವಾರ ನಡೆದಿದ್ದು ಉಪಖಜಾನೆಯಲ್ಲಿದ್ದ ಮತಪೆಟ್ಟಿಗೆ ಕಾದು ಕುಳಿತ ವಿಚಾರಕ್ಕೆ ತೆರೆ ಬಿದ್ದಿದೆ.


ಸಾಮಾನ್ಯ ಕ್ಷೇತ್ರದಲ್ಲಿ ನಾರಾಯಣ ಕಾಮೇಶ್ವರ ಭಟ್ಟ ಅಗ್ಗಾಶಿಕುಂಬ್ರಿ, ಗಣಪತಿ ರಾಮಕೃಷ್ಣ ಗಾಂವ್ಕರ ಮಾನಿಗದ್ದೆ, ಗೋಪಾಲಕೃಷ್ಣ ನರಸಿಂಹ ಗಾಂವ್ಕರ ಜಮಗುಳಿ, ಬಾಲಚಂದ್ರ ಗಜಾನನ ಗುಮ್ಮಾನಿ ಗುಮ್ಮಾನಿಮನೆ, ರಾಮಕೃಷ್ಣ ರಾಮಚಂದ್ರ ಗಾಂವ್ಕರ ಅಳ್ವೆಗದ್ದೆ, ಅ-ವರ್ಗದಿಂದ ಗಣಪತಿ ಕೃಷ್ಣಾ ಗೌಡ ಗೇರಾಳ, ಬ-ವರ್ಗದಿಂದ ಸುಬ್ರಾಯ ಚೂಡಾ ಕೈಟಕರ ಕೊಡಸೆ, ಪರಿಶಿಷ್ಟ ಪಂಗಡದಿAದ ಸಣ್ಯಾ ಬೋಂಡು ಸಿದ್ದಿ ಬಳಗಾರ, ಮಹಿಳಾ ವಿಭಾಗದಲ್ಲಿ ರಾಜೇಶ್ವರಿ ರಾಜಶೇಖರ ಧೂಳಿ ಘಟಿಗೇಮನೆ, ಸುಶೀಲಾ ರಾಮಕೃಷ್ಣ ಗಾಂವ್ಕರ ಲಿಂಗದಬೈಲು, ಸಾಲಗಾರರಲ್ಲದ ಕ್ಷೇತ್ರದಿಂದ ದತ್ತಾತ್ರೇಯ ಶಿವರಾಮ ಬೋಳುಗುಡ್ಡೆ ಗೆಲುವು ಸಾಧಿಸಿದವರಾಗಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *