


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಹಸಿರೆ ಉಸಿರು ಕಾಡಿದ್ದರೆ ನಾಡು ಸಕಲ ಚರಾಚರಾವು ಕ್ಷೇಮ ಅದಕ್ಕಾಗಿ ನಮ್ಮ ಮೊದಲ ಆದ್ಯತದ ಅರಣ್ಯ ಉಳಿಸುವುದು ಬೆಳೆಸುವುದು ಆಗಬೇಕಿದೆ. ಅದು ಸಹ ಚಿಕ್ಕ ವಯಸ್ಸಿನಲ್ಲಿ ಪರಿಸರದ ಬಗೆಗಿನ ಕಾಳಜಿ ಹೆಚ್ಚಗಬೇಕಿದೆ. ಅನ್ನ ಆಹಾರವಿಲ್ಲದೆ ಮನುಷ್ಯ ಹೇಗಾದರು ಕೆಲಸಮಯ ಬದುಕಬಲ್ಲ ಆದರೆ ಪ್ರಾಣ ವಾಯು ಆಮ್ಲಜನಕ ನೀಡುವ ಮರಗಿಡಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ನಾಯ್ಕ್ ಹೇಳಿದರು.

ಅವರು ಪಟ್ಟಣದ ಕಾಳಮ್ಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಹಮ್ಮಿಕೊಂಡ ವನಮಹೋತ್ಸವದಲ್ಲಿ ಸಸಿ ನೆಟ್ಟು ವೇಧಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ರಕ್ಷಣೆಯ ಜಾಗೃತಿ ಇನ್ನಷ್ಟು ಹೆಚ್ಚಾಗಬೇಕಿದೆ ಪ್ರತಿಯೊಬ್ಬರ ಪ್ರಾಮಾಣಿಕ ಜವಾಬ್ದಾರಿ ಗಿಡ ನೆಟ್ಟು ಬೆಳೆಸುವುದಾಗಬೇಕಿದೆ ಮತ್ತು ನೆಟ್ಟ ಗಿಡಗಳನ್ನು ಉಳಿಸಿಕೊಳ್ಳುವ ಮಹತ್ಕಾರ್ಯ ಆಗಬೇಕಿದೆ. ಮಕ್ಕಳು ನಿಮ್ಮ ಶಾಲಾ ಆವರಣದಲ್ಲಿನ ಗಿಡಗಳನ್ನು ರಕ್ಷಿಸಿ ಬೆಳೆಸಿ ಪೋಷಿಸಬೇಕಿದೆ ಎಂದು ನಿವೃತ್ತ ವಲಯ ಅರಣ್ಯಾಧಿಕಾರಿ ಸುರೇಶ್ ಬೋರ್ಕರ್ ಹೇಳಿದರು.

ಶಾಲಾ ಮಕ್ಕಳು ಅರಣ್ಯ ಮತ್ತು ಪರಿಸರದ ಕುರಿತು ಗೀತ ಗಾಯನ ಮತ್ತು ಬಾಷಣವನ್ನು ಪ್ರಸ್ತುತ ಪಡಿಸಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ ಮಡಿವಾಳ, ಮುಖ್ಯಾಧ್ಯಾಪಕಿ ಸುನಂದ ಪಾಟಣ್ಕರ್, ಪತ್ರಕರ್ತರಾದ ಸುಭ್ರಾಯ ಬಿದ್ರೆಮನೆ , ಕೇಬಲ್ ನಾಗೇಶ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಶಿಕ್ಷಕಿಯರಾದ ಪುಷ್ಪಾ ಮೊಗೇರ ನಿರೂಪಿಸಿದರು ವಿಜಯ ನಾಯ್ಕ್ ವಂದಿಸಿದರು.
Prathidvani Yellapura