
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಡೋಮಗೇರಿ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಬಂಗಾರದ ಒಡವೆ, ನಗದು ಸೇರಿದಂತೆ 1 ಲಕ್ಷದ 40 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಕೃಷಿ ಕಾಯಕ ಮಾಡುವ ಡೋಮಗೇರಿ ನಿವಾಸಿ ಪ್ರದೀಪ ದಿವಾಕರ ಹೆಗಡೆ ಎಂಬುವರ ವಾಸದ ಮನೆಯಲ್ಲಿ ಮೇ 24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹೆಂಚನ್ನು ತೆಗೆದು ಒಳನುಸುಳಿ ಕಪಾಟಿನ ಬಾಗಿಲು ಮುರಿದು 15 ಗ್ರಾಂ ಬಂಗಾರದ ಚೈನ್, 20 ಗ್ರಾಂ ಎರಡು ಬಂಗಾರದ ಬಳೆ, 5 ಗ್ರಾಂನ ಒಂದು ಉಂಗುರ ಹಾಗೂ 8000 ರೂ ನಗದು ಸೇರಿದಂತೆ 1 ಲಕ್ಷದ 40 ಸಾವಿರ ಮೌಲ್ಯದ ಸ್ವತ್ತನ್ನು ಅಪಹರಿಸಿ ಪರಾರಿಯಾಗಿದ್ದಾರೆ ಎಂದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿದ ಆಯಾಮಗಳಲ್ಲಿ ತನಿಖೆ ಪ್ರಾರಂಭಿಸಿದ್ದಾರೆ.





Prathidvani Yellapura