
ಪ್ರತಿಧ್ವನಿ ಯಲ್ಲಾಪುರ : ಸಭಾಪತಿ ಸ್ಥಾನದಿಂದ ಕೆಳಗೆ ಇಳಿಸಿರುವ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದ್ದು ಶಿಕ್ಷಕರ ಕ್ಷೇತ್ರದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇಷ್ಟು ವರ್ಷಗಳ ಕಾಲ ಘನತೆಯಿಂದ ಕಾಪಾಡಿಕೊಂಡು ಬಂದಿರುವ ಈ ವ್ಯಕ್ತಿತ್ವಕ್ಕೆ ಅವಮಾನ, ಗೌರವಕ್ಕೆ ದಕ್ಕೆ ಬಂದಿದ್ದು ನಿಜ, ಹಾಗೆಂದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಇದರಿಂದ ಮತ್ತೆ ಪುಟ್ಟಿದೆದ್ದು ಬಂದು ಇನ್ನೂ ಹೆಚ್ಚಿನ ಸಮಯ ಶಿಕ್ಷಕರ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶವನ್ನ ಪಡೆಯುವಂತಾಗಿದೆ. ಇನ್ನೂ ಹೆಚ್ಚಿನ ಶಿಕ್ಷಕರಿಗೆ ನನ್ನ ಸೇವೆ ಸಿಗುವಂತೆ ಆಗಿದೆ. ಸಾಂವಿಧಾನಿಕವಾದ ಬಂಧನದಿಂದ ಇವತ್ತು ಬಿಡುಗಡೆ ಯಾಗಿರುವುದು ಇನ್ನು ಹೆಚ್ಚಿನ ಸಂಘಟನೆಯಲ್ಲಿ ಹಾಗೂ ಶಿಕ್ಷಕರಿಗಾಗಿ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಅವರು ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸೇರಿದ್ದ ತಾಲೂಕು ಮಟ್ಟದ ಯಲ್ಲಾಪುರ ಮಾಧ್ಯಮಿಕ ನೌಕರ ಸಂಘದ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಸದಸ್ಯರನ್ನು ಉದ್ದಶಿಸಿ ಮಾತನಾಡಿದರು.
ಕಾಲ್ಪನಿಕ ವೇತನದ ಕುರಿತು ನ್ಯಾಯಾಂಗ ವ್ಯವಸ್ಥೆ ನೀಡಿರುವ ತೀರ್ಪನ್ನು ಅನುಸರಿಸಿ ಸರ್ಕಾರವನ್ನು ಈ ರಾಜ್ಯದಲ್ಲಿ ಒಪಿಎಸ್ ಜಾರಿ ಮಾಡುವಂತೆ ಒತ್ತಾಯಿಸುವುದರ ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಹಾಗೂ ಅನುದಾನಿತ ಶಾಲೆಗಳು ಕನ್ನಡ ಮಾಧ್ಯಮದ ಶಾಲೆಗಳ ಉಳಿವಿಗಾಗಿ ಸದಾ ಶ್ರಮಿಸಲು ಶಿಕ್ಷಕರ ಸಂಘಟನೆಗಳೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಕೆಪಿಎಸ್ ಶಾಲೆ ದ್ವಿಭಾಷೆ ಶಾಲೆಗಳನ್ನ ಪ್ರಾರಂಭಿಸುವ ಮೂಲಕ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನ ಅನುದಾನಿತ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಕುರಿತು ಗಂಭೀರವಾದ ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರವನ್ನು ಎಚ್ಚರಿಸಲಾಗುವುದು ಎಂದರು.

ಶಿಕ್ಷಕರ ಸಂಘಟನೆಗಳನ್ನ ಬಲಪಡಿಸಬೇಕು, ಜೊತೆಯಲ್ಲಿ ಸಂಘಟನೆ ಇಲ್ಲದಿದ್ದರೆ ಶಿಕ್ಷಕರು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಸರ್ಕಾರ ಇವರಿಂದ ಎದುರಿಸಬಹುದಾದ ಎಲ್ಲಾ ರೀತಿಯ ತೊಂದರೆಗಳ ಬಗ್ಗೆ ವಿವರಣೆ ನೀಡಿ ಸಂಘಟನೆ ಗಟ್ಟಿಗೋಳಿಸಬೇಕು. ಎಲ್ಲರೂ ಅದರ ಸದಸ್ಯರಾಗಬೇಕು, ಎಲ್ಲಾ ರೀತಿಯ ತೊಂದರೆಗಳ ಬಗ್ಗೆ ವಿವರಣೆ ನೀಡಿ ಸಂಘಟನೆ ಗಟ್ಟಿಗೋಳಿಸಬೇಕು. ಎಲ್ಲರೂ ಅದರ ಸದಸ್ಯರಾಗಿ ಕೇಂದ್ರ ಸಮಿತಿಯವರು ನೀಡುವ ಸೂಚನೆಯಂತೆ ಸಂಘಟನೆಯನ್ನು ಬಲಪಡಿಸಬೇಕು ಎಂದರು.
ವೇದಿಕೆಯಲ್ಲಿ ತಾಲೂಕ ಮಾಧ್ಯಮಿಕ ನೌಕರ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ ಕಾರ್ಯದರ್ಶಿ ಶರಣಬಸವ ಬೇವಿನಕಟ್ಟಿ ಕೇಂದ್ರ ಸಮಿತಿಯ ವೀಕ್ಷಕರಾಗಿ ಆಗಮಿಸಿದ ಎಂ ರಾಜಶೇಖರ ಹಾಗೂ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರು ತಮ್ಮ ಅಳಲುಗಳನ್ನು ಮಾಜಿ ಸಭಾಪತಿಗಳಲ್ಲಿ ನಿವೇದಿಸಿಕೊಂಡರು. ಬರಿಗೈಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರು ತಮ್ಮ ಜೀವನದ ಸಂಕಷ್ಟಗಳನ್ನು ವಿವರಿಸಿದಾಗ ಮಾಜಿ ಸಭಾಪತಿಗಳು ಈ ಎಲ್ಲ ಸಮಸ್ಯೆಗಳಿಗೆ ಸದ್ಯದಲ್ಲಿ ಪರಿಹಾರಗಳನ್ನು ಸಂಘಟನೆಗಳ ಬಲಪಡಿಸುವುದರ ಮೂಲಕ ಕಂಡುಕೊಳ್ಳಲಾಗುವುದು ಎನ್ನುವ ಭರವಸೆಯನ್ನು ನೀಡಿದರು.











Prathidvani Yellapura