
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸಬಾರದೆಂದು ಮೂರು ತಿಂಗಳು ಮೊದಲೇ ಧ್ವನಿ ಎತ್ತಿದ್ದೆವು. ನಾಗರಿಕ ವೇದಿಕೆಯ ಮೂಲಕ ತಹಶೀಲದಾರರಿಂದ ಜಿಲ್ಲಾಧಿಕಾರಿಗಳವರೆಗೆ, ಸ್ಥಳೀಯ ಶಾಸಕರಿಂದ ಜಿಲ್ಲಾ ಉಸ್ತುವಾರಿ ಸಚಿವರವರೆಗೆ, ಸಂಸದರು ಹಾಗೂ ವಕೀಲರ ಸಂಘಗಳಿಗೂ ಅಂಕೆ ಸಂಖ್ಯೆಗಳ ಸಹಿತ ಮನವಿ ಸಲ್ಲಿಸಿದ್ದೆವು. ಮೇ ಕೊನೆಯ ವಾರದಲ್ಲಿ, ಜಿಲ್ಲೆಯ ಆಗು ಹೋಗುಗಳ ಬಗ್ಗೆ ಕಳಕಳಿಯನ್ನು ಹೊಂದಿರುವ, ಜಿಲ್ಲೆಯ ನೂರಕ್ಕೂ ಹೆಚ್ಚು ಚಿಂತಕರಿಗೆ ವಾಟ್ಸಪ್ ಮೂಲಕ ಗಮನ ಸೆಳೆದಿದ್ದೆವು. ಜೂನ್ ತಿಂಗಳಲ್ಲಿ ಕರಪತ್ರ ಹಾಗೂ ಪತ್ರಿಕಾಗೋಷ್ಟಿ ಮೂಲಕ ಜನಸಾಮಾನ್ಯರಿಗೂ ಮಾಹಿತಿ ತಲುಪುವಂತೆ ಮಾಡಲಾಗಿತ್ತು. ಈ ನಮ್ಮ ಅಳಿಲು ಸೇವೆಯ ಜೊತೆಗೆ, ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ಅನೇಕ ಸಾಧಕರ ಪರಿಶ್ರಮವೂ ಕಾರಣವಾಗಿ, ಸಧ್ಯ ನಮ್ಮ ಜಿಲ್ಲೆಯ ಧ್ವನಿ ರಾಜ್ಯಕ್ಕೆ ತಲುಪಿದೆ. ಜನಪ್ರತಿನಿಧಿಗಳೂ ಎಚ್ಚರಗೊಳ್ಳುವಂತೆ ಮಾಡಿದೆ. ಎಲ್ಲರ ಅಪೇಕ್ಷೆ ಹಾಗೂ ಪ್ರಯತ್ನದ ಫಲವಾಗಿ, “ನೂತನ ಹೈಕೋರ್ಟ್ ಪೀಠ ಸ್ಥಾಪನೆಯಾಗುವದಿದ್ದರೆ ಅದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಆಗಬೇಕು, ಅಲ್ಲಿಯವರೆಗೆ ನಮ್ಮನ್ನು ಈಗಿರುವಂತೆ ಧಾರವಾಡ ಪೀಠದಲ್ಲಿಯೇ ಮುಂದುವರೆಸಬೇಕು ಎಂದು ಯಲ್ಲಾಪುರ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ್ ಆಗ್ರಹಿಸಿದ್ದಾರೆ.
ಅವರು ಗುರುವಾರ ಮಾದ್ಯಮ ಪ್ರಕಟಣೆ ಹೊರಡಿಸಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಯಲ್ಲಿ ಸೇರಿಸಬಾರದು.” ಎಂಬ ಜಿಲ್ಲೆಯ ಜನಸಾಮಾನ್ಯರ ಕೂಗು ಸರಕಾರದ ಗಮನ ಸೆಳೆಯುತ್ತಿದೆ. ಇಷ್ಟರಿಂದಲೇ ನಮ್ಮ ಬೇಡಿಕೆ ಈಡೇರಲಾರದು. ನಮ್ಮ ಪಕ್ಕದ ಜಿಲ್ಲೆಯಂತೆ ನಾವೂ ಒಟ್ಟಾಗಬೇಕು. ನಮ್ಮಲ್ಲಿರುವ ಇನ್ನಿತರ ಸಂಘಟನೆಗಳು,ಯುವ ಮಂಡಳಿಗಳು, ಸಾರ್ವಜನಿಕರು, ಮಾಧ್ಯಮಗಳು ಒಟ್ಟಿಗೇ ಕೈ ಜೋಡಿಸಿ, ಪಕ್ಷಾತೀತವಾಗಿ ಧ್ವನಿಯೆತ್ತುವ ಅವಶ್ಯಕತೆ ಇದೆ.



















Prathidvani Yellapura