
ಕೇಬಲ್ ನಾಗೇಶ್, ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಆನಗೋಡಿನಲ್ಲಿ ನೆಲೆ ನಿಂತ ಶ್ರೀ ಗೋಪಾಲಕೃಷ್ಣ ಸನ್ನಿಧಿ 800 ವರ್ಷ ಪುರಾತನ ಕದಂಬರ ಕಾಲದ ಇತಿಹಾಸವುಳ್ಳ ಶಕ್ತಿ ಕ್ಷೇತ್ರವಾಗಿದೆ. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ರೋಗ ರುಜಿನಗಳನ್ನು ಪರಿಹರಿಸುತ್ತಾ ಪಾವನ ಕ್ಷೇತ್ರವಾಗಿದೆ.

ಯಲ್ಲಾಪುರ ಪಟ್ಟಣದಿಂದ ಸರಿಸುಮಾರು 8 ಕಿಲೋಮೀಟರ್ ಅಂಂತರವಿರುವ ಆನಗೋಡು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಚ್ಚಹಸಿರಿನ ಪ್ರಕೃತಿ ಮಡಿಲಲ್ಲಿ ಕಂಗೊಳಿಸುತ್ತಿದೆ. ಬಡ ಮದ್ಯಮವರ್ಗದವರ ವಿಶೇಷ ಧಾರ್ಮಿಕ ಸಂಸ್ಕಾರಗಳು,ಮದುವೆ,ಮುಂಜಿ ಇನ್ನಿತರ ಸಾತ್ವಿಕ ಕಾರ್ಯಕ್ರಮಗಳಿಗಾಗಿ ತಕ್ಕಷ್ಟು ಮಟ್ಟಿನ ಸುದರ್ಶನ ಸಭಾ ಭವನವಿದೆ. ಆವರಣದಲ್ಲಿನ ವೀರಭದ್ರ ಮತ್ತು ಮಾರುತಿ ದೇವರ ಪುನಪ್ರತಿಷ್ಟಾಪನೆ ಜರುಗುತ್ತಿದೆ.
ಕಠಿಣ ದೀರ್ಘ ಕಾಲದ ತಪ್ಪಸ್ಸಿನೊಂದಿಗೆ ಸಾಧನೆಗೈದ ಸಾಧಕರ ಸಮಾದಿಯು ಇಲ್ಲಿದೆ. ಕಾಲಕಾಲಕ್ಕೆ ಮಳೆ,ಬೆಳೆ,ರೋಗ ರುಜಿನಗಳ ಪರಿಹಾರ ಎಲ್ಲವು ಭಗವಂತನಾದ ಗೋಪಾಲಕೃಷ್ಣನ ಸನ್ನಿದಿಯಲ್ಲಿ ನೆರವೇರುತ್ತಿದೆ.

ಧರ್ಮಕ್ಷೇತ್ರಗಳಿಗೆ ಛತ್ರಛಾಯೆಯಾಗಿ ನೆಲೆ ನಿಂತ ಪುಣ್ಯಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿದಿಯ ಪೂಜ್ಯ ಖಾವಂದರಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಲಹೆ,ಸಹಕಾರ,ಮಾರ್ಗದರ್ಶನ ದೇವಸ್ಥಾನ ಅಭಿವೃದ್ಧಿ ಪಥಕ್ಕೆ ದಾರಿದೀಪವಾಗಿದೆ.

ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಮತ್ತು ಕಿರಿಯ ಸ್ವಾಮಿಗಳ ಅನುಗ್ರಹವಿದ್ದು ಆನಗೋಡು ಶ್ರೀ ಗೋಪಾಲಕೃಷ್ಣ ಸಾನಿದ್ಯ ಪ್ರಖ್ಯಾತಿ ಹೊಂದಲಿದೆ.

ಇಂತಹ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟ ಮೊಕ್ತೇಸರ ರಾದ ಗಣಪತಿ ಮಾನಿಗದ್ದೆ ಮತ್ತು ದೇವದುರ್ಲಬ ಪದಾಧಿಕಾರಿ ಆಡಳಿತ ಮಂಡಳಿಯು ದೇಗುಲದ ಏಳಿಗೆಗೆ ಶ್ರಮಿಸುತ್ತಿದೆ.

ಸದ್ಯ ಪರಮ ಪೂಜ್ಯರ ಮತ್ತು ಭಗವಂತನ ಆಶಿರ್ವಾದದಿಂದ ಏಪ್ರಿಲ್ 8 ರಿಂದ 11 ರ ವರೆಗೆ ” ಅಷ್ಟಬಂಧ ಮಹೋತ್ಸವ ” ಶ್ರದ್ದಾ ಭಕ್ತಿಯಿಂದ ಜರುಗುತ್ತಿದ್ದು ನಾಡಿನ ಸಮಸ್ತರನ್ನು ಕೈ ಬೀಸಿ ತನ್ನತ್ತ ಕರೆಯುತ್ತಿದೆ.
ದೇಗುಲದ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ಜರುಗುತ್ತಿದ್ದು ಧಾರ್ಮಿಕ ಸೇವಾ ಕಾರ್ಯಕ್ಕೆ ಸಹಕರಿಸುವವರು ದೇಗುಲದ ಪ್ರಮುಖರನ್ನು ಸಂಪರ್ಕಿಸಬಹುದಾಗಿದೆ.










Prathidvani Yellapura